ರಿವಾಲ್ವರ ಸಮೇತ ಸಿಕ್ಕಿಬಿದ್ದ ಡಬಲ್ ಘೋಡಾ: ಇನ್ಸ್ಪೆಕ್ಟರ್ ಶ್ರೀಧರ ಸತಾರೆಗೆ ಬಹುಮಾನ ಘೋಷಣೆ
1 min readಧಾರವಾಡ: ಬೆದರಿಸಲು ಬಂದಿದ್ದ ತನ್ನ ಸಂಬಂಧಿಕನಿಗೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನ 24 ಗಂಟೆಯೊಳಗೆ ಹೆಡಮುರಿಗೆ ಕಟ್ಟಿ ಬಂಧನ ಮಾಡಲಾಗಿದ್ದು, ಶಹರ ಠಾಣೆ ಇನ್ಸ್ಪೆಕ್ಟರ್ ಕಾರ್ಯಕ್ಕೆ ಪೊಲೀಸ್ ಕಮೀಷನರ್ ಆರ್.ದಿಲೀಪ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ಮದಿಹಾಳದಲ್ಲಿ ಮೊನ್ನೆ ತಡರಾತ್ರಿ ಶೂಟೌಟ್ ಮಾಡಿ ಪರಾರಿಯಾಗಿದ್ದ ಶ್ರೀಶೈಲ ಎಂ.ಜಿ ಉರ್ಫ್ ಶ್ರೀಶೈಲ ಮಡಿವಾಳಪ್ಪ ಗಾಣಗೇರ ಉರ್ಫ್ ಡಬಲ್ ಘೋಡಾ ಬಂಧನ ಮಾಡಲಾಗಿದೆ. ಪರಾರಿಯಾಗಲು ಬಳಸಿದ್ದ ಬೈಕ್ ಹಾಗೂ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ.
ತನ್ನ ಸಂಬಂಧಿಕ ಶಿವಯೋಗಿ ಭಾವಿಕಟ್ಟಿ ಬೆದರಿಸಲು ಬಂದಾಗ ಶ್ರೀಶೈಲ ಸರ್ವೀಸ್ ರಿವಾಲ್ವರನಿಂದ ಗುಂಡು ಹಾರಿಸಿದ್ದ. ಘಟನೆಯಲ್ಲಿ ಶಿವಯೋಗಿ ಭಾವಿಕಟ್ಟಿ ಹತನಾಗಿದ್ದು, ಈರಪ್ಪ ಹೆಬ್ಬಳ್ಳಿ ಮತ್ತು ಸುನೀಲ ಕೋನಣ್ಣನವರ ಗಾಯಗೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಘಟನೆಯ ನಂತರ ಡಬಲ್ ಘೋಡಾ ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಶಹರ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ ಸತಾರೆ ನೇತೃತ್ವದ ತಂಡ, ರಿವಾಲ್ವರ ಸಮೇತ ಶ್ರೀಶೈಲ ಗಾಣಗೇರನ್ನ ಬಂಧಿಸಿದ್ದು, ಆತನ ದ್ವಿಚಕ್ರ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ
ಇನ್ಸ್ಪೆಕ್ಟರ್ ಸತಾರೆ ಮತ್ತು ತಂಡದಲ್ಲಿದ್ದ ಪಿಎಸೈ ಕೊಂಡಬಾಳ, ಎಸೈಗಳಾದ ಮಹೇಶ ಕುರ್ತಕೋಟಿ, ಸಾಳುಂಕೆ ಸೇರಿದಂತೆ ಹಲವರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಆರ್.ದಿಲೀಪ್ ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.