Posts Slider

Karnataka Voice

Latest Kannada News

ಶಿವಳ್ಳಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ವಿ.ಎನ್.ಪಾಟೀಲ ನೇಮಕ

1 min read
Spread the love

ಧಾರವಾಡ: ಗ್ರಾಮ ಪಂಚಾಯತಿ ಸದಸ್ಯರ ಅವಧಿ ಬೆನ್ನಲ್ಲೇ ರಾಜ್ಯ ಸರಕಾರ ಆಡಳಿತಾಧಿಕಾರಿನ್ನ ನೇಮಕ ಮಾಡಿದ್ದು, ಶಿವಳ್ಳಿ ಗ್ರಾಮ ಪಂಚಾಯತಿಗೆ ಇಂಜಿನಿಯರ್ ವಿ.ಎನ್.ಪಾಟೀಲರನ್ನ ನೇಮಕ ಮಾಡಲಾಗಿದೆ.

ಗ್ರಾಮ ಪಂಚಾಯತಿಗಳ ಅವಧಿ ಮುಗಿದ ನಂತರ ಅವರನ್ನೇ ಮುಂದುವರೆಸಬೇಕೆಂದು ಹಲವು ಗ್ರಾಮ ಪಂಚಾಯತಿ ಸದಸ್ಯರು ಸರಕಾರದ ಮೇಲೆ ಒತ್ತಡ ಹೇರಿದ್ದರು. ಚುನಾವಣೆ ನಡೆಯುವವರೆಗೆ ಅವಕಾಶ ನೀಡುವಂತೆ ಆಗ್ರಹವನ್ನೂ ಮಾಡಿದ್ದರು.

ರಾಜ್ಯ ಸರಕಾರ ಸಧ್ಯ ಚುನಾವಣೆ ಮಾಡುವುದು ಸಾಧ್ಯವಿಲ್ಲ ಎಂದಾದ ಮೇಲೆ ಕೋವಿಡ್-19 ಸಮಸ್ಯೆಯನ್ನ ಬಗೆಹರಿಸಲು ಅನಿವಾರ್ಯವಾಗಿ ಆಡಳಿತಾಧಿಕಾರಿಯನ್ನ ನೇಮಕ ಮಾಡಿದೆ.

ಈ ಹಿನ್ನೆಲೆಯಲ್ಲಿ ಇಂದು ಶಿವಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ವಿ.ಎನ್.ಪಾಟೀಲ, ಗ್ರಾಮದ ಸ್ಥಿತಿಯನ್ನ ಅವಲೋಕನ ಮಾಡಿದ್ರು. ಪಿಡಿಓ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *