Posts Slider

Karnataka Voice

Latest Kannada News

ಬಿಜೆಪಿ ಅಭ್ಯರ್ಥಿಯಾಗಲಿಲ್ಲ ಅಧ್ಯಕ್ಷ- ತಾಳಯಿಲ್ಲಾ, ಮೇಳಿಲ್ಲಾ: ತಮ್ಮ ತಮ್ಮಲ್ಲೇ ಗುದ್ದಾಟ

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡರು ಸೂಚಿಸಿದ ಅಭ್ಯರ್ಥಿಅಧ್ಯಕ್ಷನಾಗದೇ ಬಿಜೆಪಿಯ ಬಂಡಾಯಅಭ್ಯರ್ಥಿ ಅಧ್ಯಕ್ಷರಾದ ಪ್ರಸಂಗ ಇಲ್ಲಿನ ಎಪಿಎಂಸಿ ಚುನಾವಣೆಯಲ್ಲಿ ನಡೆದಿದ್ದು, ಇಂತಹ ಚುನಾವಣೆಯಲ್ಲೂ ಗುಂಪುಗಳಿರುವುದು ಮತ್ತಷ್ಟು ಪಕ್ಷದ ಮುಖಂಡರಲ್ಲಿ ಇರುಸು ಮುರುಸುಂಟು ಮಾಡಿದೆ.

ಸುರೇಶ ಕಿರೇಸೂರರನ್ನ ಪಕ್ಷದ ಮುಖಂಡರು ಎಪಿಎಂಸಿ ಅಧ್ಯಕ್ಷಗಿರಿಗೆ ಸೂಚನೆ ನೀಡಿದ್ದರು. ಆದರೆ, ಪಕ್ಷದಲ್ಲಿನ ಗುಂಪುಗಳಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಸಹದೇವಪ್ಪ ಸುಡಕೇನವರ ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿ ಬಸವರಾಜ ನಾಯ್ಕರ ಆಯ್ಕೆಯಾಗುವ ಮೂಲಕ ಚುನಾವಣೆಗೆ ಪರದೆ ಎಳೆದರು.

ಬಿಜೆಪಿಯಲ್ಲಿ ಬಹಳ ಶಿಸ್ತುಯಿದೆ ಎಂದು ಹೇಳಿಕೊಳ್ಳುತ್ತಿರುವಾಗಲೇ ಅಲ್ಲಿನ ಶಿಸ್ತು ಹೀಗಾಗುವ ಮೂಲಕ ಹೊರಜಗತ್ತಿಗೆ ಗೊತ್ತಾಗುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯಿದ್ದಾಗಲೂ ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮಹೇಶ ಟೆಂಗಿನಕಾಯಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವರು ಬಂದು ಬಂಡು ಅಭ್ಯರ್ಥಿ ಅಧ್ಯಕ್ಷರಿಗೂ ಸತ್ಕರಿಸಿದರು.


Spread the love

Leave a Reply

Your email address will not be published. Required fields are marked *