Posts Slider

Karnataka Voice

Latest Kannada News

ಪೊಲೀಸರ ಗೂಂಡಾ ವರ್ತನೆ: ಹಿರಿಯ ಪೊಲೀಸ್ ಅಧಿಕಾರಿಗಳ ಮೌನಂ ಸಮ್ಮತಿ ಲಕ್ಷಣಂ…!

1 min read
Spread the love

ರಾಯಚೂರು: ಕಾರು ಚಲಾಯಿಸುತ್ತಿದ್ದ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಪೊಲೀಸರೇ ಟ್ರಾಫಿಕನಲ್ಲಿ ನಿಂತು ಕೆಲಕಾಲ ಗೂಂಡಾ ವರ್ತನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.


ಸ್ಟೇಷನ್ ರಸ್ತೆಯಲ್ಲಿ ಯುವಕನ ಜೊತೆ ಸಂಯಮ ಕಳೆದುಕೊಂಡಂತೆ ವರ್ತಿಸಿದ ಪೊಲೀಸರು, ಆತನನ್ನ ಎಳೆದುಕೊಂಡು ಮತ್ತೊಂದು ಕಾರಿನಲ್ಲಿ ದಬ್ಬುವ ದೃಶ್ಯ, ಇವರೇಕೆ ಹೀಗೆ ಗೂಂಡಾಗಳಂತೆ ನಡೆದುಕೊಳ್ಳುತ್ತಿದ್ದಾರೆಂದು ಪ್ರಶ್ನಿಸುವಂತಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರೂ ಕಾನ್ಸ್‌ಟೇಬಲ್ ಅತೀಯಾಗಿ ನಡೆದುಕೊಂಡರು.
ಸಾರ್ವಜನಿಕವಾಗಿ ಯುವಕನಿಗೆ ಅಸಹ್ಯವಾಗಿ ನಡೆಸಿಕೊಂಡು ಕೊರೋನಾ ಸಮಯದಲ್ಲೂ ತಮ್ಮತನವನ್ನ ಪೊಲೀಸರು ತೋರಿಸೋಕೆ ಮುಂದಾಗಿದ್ದು, ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿತು.
ತಿಳಿದವರಾಗಿಯೇ ಹೀಗೆ ರಸ್ತೆಯಲ್ಲೇ ಕಾದಾಟಕ್ಕೆ ಇಳಿದಂತೆ ನಡೆದುಕೊಂಡಿರುವುದು ಪೊಲೀಸರಿಗೆ ಶೋಭೆ ತರುವಂತಹದ್ದಲ್ಲವಲ್ಲವೇ…?


Spread the love

Leave a Reply

Your email address will not be published. Required fields are marked *