ಡಿಕೆ ಶಿವಕುಮಾರ ಭೇಟಿ ಮಾಡಿದ ಹೊಟೇಲ್-ರೆಸ್ಟೋರೆಂಟ್ ಅಸೋಸಿಯೇಷನ್
1 min readಬೆಂಗಳೂರು: ನಿರಂತರವಾಗಿ ನಡೆಯುತ್ತಿರುವ ಲಾಕ್ ಡೌನ್ ಗಳಿಂದ ಹಲವು ಸಮಸ್ಯೆಗಳನ್ನ ಎದುರಿಸುತ್ತಿರುವ ಉದ್ಯಮದ ಬಗ್ಗೆ ಚರ್ಚೆ ಮಾಡಲು ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಬಳಗದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ಮಾಡಿ ಮಾತುಕತೆ ನಡೆಸಿದರು.
ರಾಜ್ಯದಲ್ಲಿ ಹೊಟೇಲ್ ಉದ್ಯಮವನ್ನ ನಂಬಿಕೊಂಡು ಲಕ್ಷಾಂತರ ಜನರು ಜೀವನ ನಡೆಸುತ್ತಿದ್ದಾರೆ. ಕೊರೋನಾ ಹಾವಳಿಯಿಂದ ನಿರಂತರವಾಗಿ ನಷ್ಟವನ್ನಅನುಭವಿಸುವ ಜೊತೆಗೆ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಇವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕಿದ್ದು, ಇದಕ್ಕೆ ಪ್ರತಿಪಕ್ಷದ ಬೆಂಬಲವೂ ಅವಶ್ಯವೆಂಬ ಮನವರಿಕೆ ಮಾಡಿಕೊಡಲು ಭೇಟಿ ನಡೆಯಿತು.
ಚಂದ್ರಶೇಖರ ಹೆಬ್ಬಾರ, ಮಧುಕರ ಶೆಟ್ಟಿ, ಎಂ.ವಿ.ರಾಘವೇಂದ್ರರಾವ್, ವಾಶುದೇವ ಅಡಗೆ, ಪಿ.ಸಿ.ರಾವ್, ಗಣೇಶ ರಾವ್, ಕೃಷ್ಣ ಮಹಾರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.