Posts Slider

Karnataka Voice

Latest Kannada News

ನವಲಗುಂದ ನಾಗರಳ್ಳಿಯಲ್ಲಿ ಪೈನಾನ್ಸರಿಂದ ಗುಂಡಿನ ದಾಳಿ- ಓರ್ವನ ಸ್ಥಿತಿ ಚಿಂತಾಜನಕ

1 min read
Spread the love

ನವಲಗುಂದ: ಫೈನಾನ್ಸಿಯರ್‌ನೋರ್ವ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ತೀವ್ರ ಗಾಯಗಳಾದ ಘಟನೆ ಈಗಷ್ಟೇ ನಡೆದಿದೆ.

ನಾಗರಳ್ಳಿ ಗ್ರಾಮದ ನಾಗಪ್ಪ ಹರ್ತಿ ಎಂಬಾತರೊಂದಿಗೆ ಬೆಳಿಗ್ಗೆ ಜಗಳವಾಡಿಕೊಂಡಿದ್ದ ಮಲ್ಲಪ್ಪ ಕರಿ, ಸಂಜೆ ಗ್ರಾಮದಲ್ಲಿ ಕಂಡ ಕಂಡವರ ಮೇಲೆ ಗುಂಡು ಹಾರಿಸಿದ್ದಾನೆ.

 

ಇದರಿಂದ ಶರಣಪ್ಪ ಕಾಳೆ ಎಂಬಾತನಿಗೆ ತೀವ್ರ ಥರದ ಗಾಯವಾಗಿದ್ದು, ನವಲಗುಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

ನಾಗರಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.


Spread the love

Leave a Reply

Your email address will not be published. Required fields are marked *