Posts Slider

Karnataka Voice

Latest Kannada News

ಕರ್ತವ್ಯಲೋಪ ಡಿಎಚ್‌ಓ ಎತ್ತಂಗಡಿ: ಒಂದೇ ದಿನದಲ್ಲಿ ಪ್ರಭಾರಿಯನ್ನ ತಂದ ಜಿಲ್ಲಾಧಿಕಾರಿ

1 min read
Spread the love

ಕಲಬುರಗಿ: ಕೊರೋನಾ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸ್ಪಂದಿಸದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನ ಜಿಲ್ಲಾಧಿಕಾರಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


ಸಾಂಕ್ರಾಮಿಕ ಸೋಂಕಾದ ಕೊರೋನಾ ತಡೆಗಟ್ಟಲು ತೆಗೆದುಕೊಳ್ಳಲು ಸೂಚನೆ ನೀಡಿದರೂ ಡಿಎಚ್‌ಓ ಎಂ.ಎ.ಜಬ್ಬಾರ ನಿರ್ಲಕ್ಷ್ಯ ತೋರಿದ್ದಾರೆ. ಸೋಂಕನ್ನ ತಡೆಗಟ್ಟಲು ವಿಫಲವಾಗಿದ್ದಾರೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್, ಜಬ್ಬಾರ ಅವರ ಸ್ಥಾನಕ್ಕೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಅವರನ್ನ ಪ್ರಭಾರಿಯಾಗಿ ವರ್ಗಾವಣೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಹರಡುತ್ತಿರುವ ಸೋಂಕನ್ನ ತಡೆಗಟ್ಟಲು ಸಹಕಾರ ನೀಡದೇ ಇದ್ದರೇ ಕಠಿಣ ಕ್ರಮವಾಗತ್ತೆ ಎಂಬುದನ್ನ ಈ ಮೂಲಕ ಜಿಲ್ಲಾಧಿಕಾರಿ ಬಿ.ಶರತ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಂತಾಗಿದೆ.


Spread the love

Leave a Reply

Your email address will not be published. Required fields are marked *