ಪಾಸಿಟಿವ್ನಿಂದ ಹೊರ ಬಂದವರಿಗೆ ಹೂಮಳೆ- ಪೊಲೀಸ್ ಠಾಣೆಯಲ್ಲಿ ಅದೇಷ್ಟು ಗೌರವ ಸಿಗ್ತಿದೆ ಗೊತ್ತಾ…? Exclusive video
1 min readಧಾರವಾಡ: ಕಳೆದ ಐದು ತಿಂಗಳಿಂದ ನಿರಂತರವಾಗಿ ಕೊರೋನಾ ವಿರುದ್ಧ ಹೋರಾಟ ಮಾಡುತ್ತಲೇ ಸೇವೆ ಸಲ್ಲಿಸುತ್ತಿದ್ದವರಿಗೆ ಕೋವಿಡ್-19 ಅಂಟಿಕೊಂಡಿತ್ತು. ಅದರಿಂದ ಕ್ಷೇಮವಾಗಿ ಹೊರಗೆ ಬಂದವರಿಗೆ ಇನ್ನುಳಿದ ಸಹೋದ್ಯೋಗಿಗಳು ಆಧಾರದಿಂದ ನೋಡಿಕೊಳ್ಳುತ್ತಿದ್ದಾರೆ.
ಧಾರವಾಡ ಸಂಚಾರಿ ಠಾಣೆಯ ಹವಾಲ್ದಾರ ಮಂಜುಳಾ ಬಡಿಗೇರ ಮತ್ತು ಪೊಲೀಸ್ ಕಾನ್ಸ್ಟೇಬಲ್ ಬಸವರಾಜ ಡುಂಬರಕೊಪ್ಪ ಕೊರೋನಾ ವೈರಸ್ಗೆ ಒಳಗಾಗಿದ್ದರು. ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ತಗುಲಿದ ಈ ರೋಗವನ್ನ ಎದುರಿಸಿ ಬಂದ ಇಬ್ಬರು ಕೊರೋನಾ ವಾರಿಯರ್ಸ್ಗಳನ್ನ ಆತ್ಮೀಯವಾಗಿ ಠಾಣೆಗೆ ಬರಮಾಡಿಕೊಳ್ಳಲಾಯಿತು.
ಠಾಣೆಯ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯ್ಕರ್ ಸೇರಿದಂತೆ ಬಹುತೇಕ ಸಿಬ್ಬಂದಿಗಳು ಶಾಲು ಹಾಕಿ ಸತ್ಕರಿಸಿದರು. ಇದರ ಜೊತೆಗೆ ಅವರಿರ್ವರ ಮೇಲೆ ಹೂಗಳನ್ನ ಎಸೆದು ಕರ್ತವ್ಯಕ್ಕೆ ಬರಮಾಡಿಕೊಂಡರು.