Karnataka Voice

Latest Kannada News

ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೋಬ್ಬ ನಟನ ಶವ: ದಂಗಾದ ಬಾಲಿವುಡ್

ಮುಂಬೈ: ಚಿತ್ರನಟ ಸುಶಾಂತಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ರೂಪ ಪಡೆಯುತ್ತಿರುವ ಸಮಯದಲ್ಲೇ ಮತ್ತೋಬ್ಬ ಕಲಾವಿದ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಏ ರಿಸ್ಥೆ ಹೈ ಪ್ಯಾರ್ ಕೆ ಯಲ್ಲಿ ‘ಶೌರ್ಯ ಮಹೇಶ್ವರಿ’ ಪಾತ್ರದಲ್ಲಿ ಜನಪ್ರಿಯತೆ ಗಳಿಸಿದ್ದ ನಟ ಸಮೀರ್ ಶರ್ಮಾ ಮುಂಬೈನ ಮಲಾದ್‌ನಲ್ಲಿರುವ ಅಪಾರ್ಟ್ ನೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ.
ಅಪಾರ್ಟಿನಲ್ಲಿದ್ದ 44 ವರ್ಷದ ಈ ನಟ ಎರಡ್ಮೂರು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮನೆ ಒಳಗೆ ಹೋದಾಗ ಶವ ಕೊಳೆತ ಸ್ಥಿತಿಯಲ್ಲಿತ್ತು. ಸೆಕ್ಯುರಿಟಿ ಗಾರ್ಡ್ ಗೆ ಶವ ಫ್ಯಾನ್ ಗೆ ನೇತಾಡುತ್ತಿರುವುದು ಕಾಣಿಸಿದೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಮಗ್ರವಾದ ತನಿಖೆಗೆ ಇಳಿದಿದ್ದಾರೆ.
ಎರಡ್ಮೂರು ದಿನಗಳ ಹಿಂದೆ ನಟ ಮನೆಯೊಳಗೆ ಹೋದ ಬಗ್ಗೆ ಸಿಸಿಟಿವಿ ದೃಶ್ಯ ಕಲೆ ಹಾಕಿದ್ದಾರೆ.

Leave a Reply

Your email address will not be published. Required fields are marked *