Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ: ವಿದ್ಯಾನಗರ ಠಾಣೆ ಪೊಲೀಸರು ನಡೆಸುತ್ತಿದ್ದಾರೆ ತನಿಖೆ..!

1 min read
Spread the love

ಹುಬ್ಬಳ್ಳಿ: ಗೌರಿ ಗಣೇಶನ ಹಬ್ಬದ ಸಡಗರದಲ್ಲಿ ಜನರು ಮುಳುಗಿ ಹೋಗಿದ್ದಾಗಲೇ ಅದೊಂದು ಘಟನೆ ಎಂತಹ ಕಟುಕರನ್ನು ಕಣ್ಣೀರಿಡುವಂತೆ ಮಾಡಿತ್ತು. ಈ ಅಮಾನವೀಯ ಸ್ಥಿತಿಗೆ ಕಾರಣವಾದ ಮಹಿಳೆಯ ಬಗ್ಗೆ ಆಕ್ರೋಶವ್ಯಕ್ತಪಡಿಸುತ್ತಿದ್ದರು.

ಹೌದು. ಉಣಕಲ್ ಕೆರೆಯ ದಂಡೆಯಲ್ಲಿ ನವಜಾತ ಶಿಶುವೊಂದು ನೀರಿನ ಕೊಳಚೆಯಲ್ಲಿ ಶವವಾಗಿ ತೇಳುತ್ತಿತ್ತು. ಬೆಳಿಗ್ಗೆ ಯಾರೂ ತಂದು ಎಸೆದು ಹೋಗಿದ್ದಾರೋ ಗೊತ್ತಿಲ್ಲ. ಆದರೆ, ಗಣೇಶನನ್ನ ತೊಡೆಯ ಮೇಲೆ ಗೌರಿ ಮೂರ್ತಿಯನ್ನ ಕಂಡು ಭಕ್ತಿಯಿಂದ ನಮಿಸುವ ಸಮಯದಲ್ಲೇ ಇಂತಹದಕ್ಕೆ ಅಮಾನವೀಯವಾಗಿ ನಡೆದುಕೊಂಡಿರುವುದು ಹಲವರ ಮನಸ್ಸಿಗೆ ಘಾಸಿ ಮಾಡಿತ್ತು.

ನೀರಿನಲ್ಲಿ ಜೀವ ಕಳೆದುಕೊಂಡು ಕಸದಲ್ಲಿ ತೇಲುತ್ತಿದ್ದ ಮಗುವನ್ನ ನೋಡಲು ನೂರಾರೂ ಜನ ಜಮಾಯಿಸಿದ್ದರು. ಘಟನೆ ಕುರಿತು ಮಾಹಿತಿ ಪಡೆದ ನಂತರ ಸ್ಥಳಕ್ಕೆ ಆಗಮಿಸಿದ ವಿದ್ಯಾನಗರ ಠಾಣೆಯ ಪೊಲೀಸರು ಮಗುವಿನ ಶವವನ್ನ ಕಿಮ್ಸ್ ಗೆ ರವಾನೆ ಮಾಡಿದ್ದಾರೆ. ಯಾರೂ ತಂದು ಮಗುವನ್ನ ಎಸೆದು ಹೋಗಿದ್ದಾರೆಂಬ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *