Posts Slider

Karnataka Voice

Latest Kannada News

ಮತ್ತೋರ್ವ ಶಿಕ್ಷಕಿ ಕೊರೋನಾಗೆ ಬಲಿ: ನಿಲ್ಲದ ಇಲಾಖೆಯ ತಲ್ಲಣ

1 min read
Spread the love

ದಾವಣಗೆರೆ: ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಕೋವಿಡ್-19ನಿಂದ ಮೃತಪಡುವ ಪ್ರಕರಣಗಳು ಇನ್ನೂ ನಿರಂತರವಾಗಿ ನಡೆಯುತ್ತಲೇ ಇದ್ದು, ಈಗ ಮತ್ತೋರ್ವ ಸಹಶಿಕ್ಷಕಿ ಸಾವಿಗೀಡಾಗಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಕಿಯಾಗಿದ್ದ ಭಾಗೀರಥಿ ಎಂಬುವವರೇ ಸಾವಿಗೀಡಾಗಿದ್ದು, ಕಳೆದ ಒಂದು ವಾರದಲ್ಲಿ ಏಳಕ್ಕೂ ಹೆಚ್ಚು ಜನರು ತೀರಿಕೊಂಡಂತಾಗಿದೆ.

ಕೊರೋನಾ ಸಮಯದಲ್ಲಿ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನ ಜಾರಿಗೆ ತಂದು ಗ್ರಾಮೀಣ ಪ್ರದೇಶದಲ್ಲಿಯೂ ಮತ್ತೆ ಶಿಕ್ಷಕರು ಹೋಗುವಂತಾಗಿದ್ದೇ ಇದಕ್ಕೇಲ್ಲ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಮೃತ ಭಾಗಿರಥಿಯವರ ನಿಧನದಿಂದ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮೀಣ ಶಿಕ್ಷಕರ ಸಂಘ ಕೋರಿದೆ.


Spread the love

Leave a Reply

Your email address will not be published. Required fields are marked *