ಸಿಎಂ ತವರಲ್ಲೇ ಶಿಕ್ಷಕರ ಸ್ಥಿತಿ ಅಯೋಮಯ: ದೃಢೀಕರಣ ನೀಡದಿದ್ದರೇ ಕ್ರಮ
1 min readಶಿವಮೊಗ್ಗ: ಕೊರೋನಾ ಪಾಸಿಟಿವ್ ಪ್ರಕರಣಗಳು ಶಿವಮೊಗ್ಗ ತಾಲೂಕಿನಲ್ಲಿ ಹೆಚ್ಚಾಗುತ್ತಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಒಪ್ಪಿಕೊಂಡಿದ್ದು, ಅದಕ್ಕೆ ಪೂರಕವಾದ ಆದೇಶವೊಂದನ್ನ ಹೊರಡಿಸಿದ್ದು, ಇದು ಇನ್ನೂ ಸಿಎಂ ಯಡಿಯೂರಪ್ಪನವರಿಗೆ ಮತ್ತು ಶಿಕ್ಷಣ ಸಚಿವರಿಗೆ ತಿಳಿಯದೇ ಇರುವುದು ಸೋಜಿಗ ಮೂಡಿಸಿದೆ.
ಶಿವಮೊಗ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದು, ಶಿಕ್ಷಕರಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅವರ ಜೊತೆಗೆ ಪ್ರೈಮರಿ ಕಾಂಟ್ಯಾಕ್ಟನಲ್ಲಿ ಬರುವವರು ತಕ್ಷಣವೇ ಮಾಹಿತಿ ನೀಡಿದರೇ ಅವರಿಗೆ ರಜೆ ನೀಡಲಾಗುವುದೆಂದು ತಿಳಿಸಿದ್ದಾರೆ.
ಸೋಜಿಗವೆಂದರೇ, ಅಲ್ಲಿಯೂ ಶಿಕ್ಷಣಾಧಿಕಾರಿಗಳು ಶಿಕ್ಷಕರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಪಾಸಿಟಿವ್ ಬಂದವರು, ಕ್ವಾರಂಟೈನಲ್ಲಿದ್ದವರೂ ವೈಧ್ಯರು, ಇನ್ಸಿಡೆಂಟ್ ಕಮಾಂಡರ್, ಪಿಡಿಓ ಅಥವಾ ನಗರ ಪಾಲಿಕೆ ಅಧಿಕಾರಿಗಳಿಂದ ದೃಢೀಕರಣ ನೀಡಬೇಕು. ಇಲ್ಲದಿದ್ದರೇ ಬಿಇಓ ಕ್ರಮ ಜರುಗಿಸುವುದಿಲ್ಲವಂತೆ, ಬದಲಿಗೆ ಮುಖ್ಯ ಶಿಕ್ಷಕರು ಕ್ರಮ ವಹಿಸುತ್ತಾರಂತೆ… ಇದು ಶಿಕ್ಷಣ ಇಲಾಖೆಯ ಸ್ಥಿತಿ..