ಧಾರವಾಡದ ಎಸಿ ಜುಬೇರ ವರ್ಗಾವಣೆ: ಡಾ.ಗೋಪಾಲಕೃಷ್ಣ ನೂತನ ಅಧಿಕಾರಿ
1 min readಬೆಂಗಳೂರು: ಇಂದು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆಯ ಆದೇಶವನ್ನ ಹೊರಡಿಸಿದ್ದು ಧಾರವಾಡ ಉಪವಿಭಾಗಾಧಿಕಾರಿಯಾಗಿದ್ದ ಮೊಹ್ಮದ ಜುಬೇರ ಅವರನ್ನ ವರ್ಗಾವಣೆ ಮಾಡಲಾಗಿದೆ.
ಹಾಲಿ ಮೊಹ್ಮದ ಜುಬೇರರಿಗೆ ಯಾವುದೇ ಜಾಗವನ್ನ ತೋರಿಸದೇ ಅವರ ಜಾಗಕ್ಕೆ ಐಎಎಸ್ ಅಧಿಕಾರಿ ಡಾ. ಗೋಪಾಲಕೃಷ್ಣ ಬಿ ಅವರನ್ನ ವರ್ಗಾವಣೆ ಮಾಡಲಾಗಿದೆ.
ಬಹುತೇಕ ಕೆಎಎಸ್ ಅಧಿಕಾರಿಗಳ ಸ್ಥಾನಪಲ್ಲಟವಾಗಿದ್ದು, ಅಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹಲವು ಉತ್ತಮ ಕೆಲಸ ಮಾಡುತ್ತಿದ್ದ ಮೊಹ್ಮದ ಜುಬೇರ, ಬಹುತೇಕರೊಂದಿಗೆ ಒಳ್ಳೆಯವರೆನಿಸಿಕೊಂಡಿದ್ದರು.
ಜಿಲ್ಲೆಯ ಬಹುತೇಕ ಸಮಸ್ಯೆಗಳಿಗೆ ತಕ್ಷಣವೇ ಸ್ಪಂಧಿಸುತ್ತಿದ್ದ ಮೊಹ್ಮದ ಜುಬೇರ ವರ್ಗಾವಣೆಯಾಗಿರುವುದು ಹಲವರಿಗೆ ಬೇಸರವನ್ನುಂಟು ಮಾಡಿದ್ದು ಸುಳ್ಳಲ್ಲ.