Karnataka Voice

Latest Kannada News

“94 ಬ್ಯಾಚ್” ರಾಜು ಕಟಗಿ ದುರ್ಮರಣ: ಧಾರವಾಡ ಸಂಚಾರಿ ಠಾಣೆಯಲ್ಲಿ ನೀರವ ಮೌನ

ಧಾರವಾಡ: ಸದಾಕಾಲ ಎಲ್ಲರೊಂದಿಗೂ ನಗು ನಗುತ್ತಲೇ ಮಾತನಾಡುತ್ತಿದ್ದ ಧಾರವಾಡ ಸಂಚಾರಿ ಠಾಣೆಯ ಹಿರಿಯ ಪೇದೆ ರಾಜೇಶ ಕಟಗಿ ರಸ್ತೆ ಅಪಘಾತದಿಂದ ಚೇತರಿಸಿಕೊಳ್ಳದೇ ಮೃತಪಟ್ಟ ಘಟನೆ ನಡೆದಿದೆ.

ಬಹುತೇಕರಿಗೆ ‘ರಾಜು’ ಕಟಗಿ ಎಂದೇ ಪರಿಚಿತರಾಗಿದ್ದ ರಾಜೇಶ ಕಟಗಿ ಧಾರವಾಡ ಸಂಚಾರಿ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1994 ರ ಬ್ಯಾಚಿನ ಕಟಗಿ ಅಗಲಿಕೆ ಸಂಚಾರಿ ಠಾಣೆಯಲ್ಲಿ ನೀರವ ಮೌನವನ್ನ ಮನೆ ಮಾಡಿಸಿದೆ. ರಾಜು ಕಟಗಿಯವರ ಪತ್ನಿ ಕೂಡಾ ಸಂಚಾರಿ ಠಾಣೆಯಲ್ಲೇ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳನ್ನ ರಾಜು ಕಟಗಿ ಅಗಲಿದ್ದಾರೆ.

ಯಾವುದೇ ಅಧಿಕಾರಿ ಬಂದರೂ ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಿದ್ದ ರಾಜು ಕಟಗಿ, ಠಾಣೆಯಲ್ಲಿಯೂ ಹಸನ್ಮುಖಿಯಾಗಿಯೇ ಎಲ್ಲರೊಂದಿಗೂ ಬರೆಯುತ್ತಿದ್ದರು. ತಮಗೆ ನೀಡಿದ ಕಾರ್ಯವನ್ನ ನಿಷ್ಟೆಯಿಂದ ನಿಭಾಯಿಸುತ್ತಿದ್ದ ರಾಜು ಕಟಗಿಯ ಅಗಲಿಕೆ ಇಲಾಖೆಯಲ್ಲಿ ತೀವ್ರ ಬೇಸರ ಮೂಡಿಸಿದೆ.

1994 ರ ಬ್ಯಾಚಿನಲ್ಲಿದ್ದ ರಾಜು ಕಟಗಿ ಚೆನ್ನಪಟ್ಟಣದಲ್ಲಿ ತರಬೇತಿ ಪಡೆದು ಬಂದಿದ್ದರು. ಅವಳಿನಗರ ಬಹುತೇಕ ಠಾಣೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದ ರಾಜೇಶ ಕಟಗಿ ಇನ್ನೂ ನೆನಪು ಮಾತ್ರ..!

Leave a Reply

Your email address will not be published. Required fields are marked *