ಮೂರುಸಾವಿರ ಮಠದಲ್ಲಿ ಶ್ರೀ ರುದ್ರಮುನಿ ದೇವರು..!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ಮೂರುಸಾವಿರ ಮಠದ ವಿವಾದಗಳು ಹಗಲಿರುಳು ನಡೆಯುತ್ತಲಿದ್ದು, ಇದೀಗ ಮೂರುಸಾವಿರ ಮಠಕ್ಕೆ ತಿಪಟೂರಿನ ಶ್ರೀ ರುದ್ರಮುನಿ ದೇವರು ಆಗಮಿಸಿದ್ದು, ಹಲವು ರೀತಿಯ ಮಾತುಕತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಇಳಿಸಂಜೆ ಮೂರುಸಾವಿರ ಮಠಕ್ಕೆ ಶ್ರೀ ರುದ್ರಮುನಿ ದೇವರು ಆಗಮಿಸಿದ್ದು ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳನ್ನ ಭೇಟಿಯಾಗಿ ಮಾತುಕತೆ ನಡೆಸಿದರೆಂದು ಹೇಳಲಾಗಿದೆ.
ಮೂರುಸಾವಿರ ಮಠಕ್ಕೆ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಬರುವಾಗ, ಶ್ರೀ ರುದ್ರಮುನಿ ದೇವರಿಗೆ ಒಂದು ಕೋಟಿ ರೂಪಾಯಿ ಕೊಡಬೇಕಾಗಿ ಬಂದಿತ್ತು ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ, ಕೆಎಲ್ಇ ಸಂಸ್ಥೆಗೆ ಯಾವುದೇ ರೀತಿಯಾಗಿ ಜಮೀನು ಕೊಡುವುದು ಬೇಡವೆಂದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಶ್ರೀ ರುದ್ರಮುನಿ ದೇವರು ಆಗಮಿಸಿದ್ದಾರೆ.
ಕೆಲಕಾಲ ಮೂರುಸಾವಿರ ಮಠದಲ್ಲಿ ಕೆಲವು ಪ್ರಮುಖರು ಹಾಗೂ ಮೂರುಸಾವಿರ ಮಠದ ಹಾಲಿ ಶ್ರೀಗಳೊಂದಿಗೆ ಮಾತನಾಡಿರುವ ಶ್ರೀ ರುದ್ರಮುನಿ ದೇವರು, ಇಂದು ಇಲ್ಲಿಯೇ ತಂಗಲಿದ್ದಾರೆಂದು ಹೇಳಲಾಗಿದೆ.

