Posts Slider

Karnataka Voice

Latest Kannada News

ಅತ್ಯಾಚಾರಿಗಳನ್ನ ಸಾರ್ವಜನಿಕವಾಗಿ ಗುಂಡಿಕ್ಕಿ- ಕೂಡಲಸಂಗಮ  ಸ್ವಾಮೀಜಿಗಳ ಹೇಳಿಕೆ

1 min read
Spread the love

ವಿಜಯಪುರ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆಗೈಯುವ ಕಾನೂನು ತರುವಂತೆ ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಇನ್ನು ಮಹಿಳೆ ತಾಯಿ ಸ್ವರೂಪ. ಅಂತಹ ತಾಯಿಯನ್ನು ಅತ್ಯಾಚಾರ ಮಾಡುವವರನ್ನು ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆಗೈಯ ಬೇಕು‌. ಇಲ್ಲವೇ ಗಲ್ಲು ಶಿಕ್ಷೆ ನೀಡುವಂತಹ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಕಾನೂನು ತರಬೇಕು ಎಂದರು.

ತಾಯಿಯ ಮೇಲೆ ಅಮಾನುಷ ಅತ್ಯಾಚಾರ ನಡೆಯುತ್ತಿವೆ. ಇದು ನೈತಿಕತೆಗೆ ಭಾರತ ತಲೆ ತಗ್ಗಿಸುವ ಕೆಲಸ ಆಗುತ್ತಿವೆ. ಅದಕ್ಕಾಗಿ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಲು ಜಯಮೃತ್ಯುಂಜಯ ಸ್ವಾಮಿ ಒತ್ತಾಯಿಸಿದರು.

ಮೊನ್ನೆಯಷ್ಟೇ ಮಾಗಡಿಯ ಸ್ವಾಮೀಜಿಗಳು, ಅತ್ಯಾಚಾರ ಮಾಡುವ ದುಷ್ಕರ್ಮಿಗಳ ಜನನಾಂಗವನ್ನ ಕತ್ತರಿಸಬೇಕೆಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಕೂಡಲಸಂಗಮದ ಸ್ವಾಮೀಜಿಗಳು ಗುಂಡಿಕ್ಕಿ ಹತ್ಯೆಗೈಯುವ ಕಾನೂನು ತರಬೇಕೆಂದು ಹೇಳಿರುವುದು ಬೇರೆಯದೇ ಸ್ವರೂಪ ಪಡೆಯಲಿದೆ.


Spread the love

Leave a Reply

Your email address will not be published. Required fields are marked *