Posts Slider

Karnataka Voice

Latest Kannada News

ರಮೇಶ ಜಾರಕಿಹೊಳಿ ಕಿಂಗ್ ಆಗ್ತಾರೆ: ಜಯ ಮೃತ್ಯುಂಜಯ ಸ್ವಾಮೀಜಿ- ವಿನಯ ಕುಲಕರ್ಣಿ ಮಂತ್ರಿಯಾಗೋಕೆ ಸ್ವಾಮೀಜಿಗಳೇ ಕಾರಣ- ಜಾರಕಿಹೊಳಿ

1 min read
Spread the love

ಬೆಳಗಾವಿ: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಬೆಳಗಾವಿ ಸುವರ್ಣ ಸೌಧದ ಎದುರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದರು‌.

ಮನವಿ ಸ್ವೀಕರಿಸಿ ಮಾತನಾಡಿದ ರಮೇಶ ಜಾರಕಿಹೊಳಿ, ಸರ್ಕಾರ ಸದಾ ನಿಮ್ಮ ಸಮುದಾಯದ ಪರವಾಗಿ ಇರಲಿದೆ. ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.

ಚುನಾವಣೆ ನೀತಿ ಸಂಹಿತೆ ಇರುವುದರಿಂದ ನಾವೇನೂ ಆಶ್ವಾಸನೆ ಕೊಡಲು ಆಗಲ್ಲ. ನೇರವಾಗಿ ಬೆಂಗಳೂರಿಗೆ ಹೋಗಿ ಸಿಎಂ ಬಿಎಸ್‌ವೈಗೆ ಸಮಾಜದ ಮನವಿ ತಿಳಿಸುತ್ತೇನೆ. ಕಳೆದ 10 ವರ್ಷಗಳಿಂದ ನಮ್ಮ ಮೇಲೆ ಸ್ವಾಮೀಜಿಗಳ ಆಶೀರ್ವಾದ ಇದೆ. ಹಿಂದೆ  2013 – 18ರ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ರು. ಆಗ ದೆಹಲಿಗೆ ತೆರಳಿ ದಿಗ್ವಿಜಯ ಸಿಂಗ್‌ಗೆ ಭೇಟಿಯಾಗಿದ್ದೆವು. ವಿನಯ್ ಕುಲಕರ್ಣಿ ರನ್ನು ಸಚಿವರನ್ನಾಗಿ ಮಾಡಬೇಕು ಅಂತಾ ಹೇಳಿರಲಿಲ್ಲ. ನಮ್ಮ ಸಮಾಜದ ಯಾರನ್ನಾದರೂ ಒಬ್ಬರನ್ನು ಮಂತ್ರಿ ಮಾಡುವಂತೆ ಮನವಿ ಮಾಡಿದ್ರು. ಇದಾದ ಮೇಲೆ ವಿನಯ್ ಕುಲಕರ್ಣಿ ಮಂತ್ರಿಯಾದರು ಎಂದು ಹೇಳಿದರು.

ರಮೇಶ್ ಜಾರಕಿಹೊಳಿಗೂ ಸಹ ಅನ್ಯಾಯವಾಗಿದೆ ಮಂತ್ರಿ ಮಾಡಬೇಕೆಂದು ಸ್ವಾಮೀಜಿ ಆಗ್ರಹಿಸಿದ್ರು. ಕೇವಲ ಒಂದೇ ಸಮುದಾಯ ಅಲ್ಲ ಎಲ್ಲಾ‌ ಸಮುದಾಯ ಮೇಲೆ ಶ್ರೀಗಳಿಗೆ ಪ್ರೀತಿ ಇದೆ ಎಂದು ಹೇಳಿದ ರಮೇಶ ಜಾರಕಿಹೊಳಿ, ಶ್ರೀಗಳಿಂದ ಮನವಿ ಸ್ವೀಕರಿಸಿದರು.

ರಮೇಶ್ ಜಾರಕಿಹೊಳಿ‌ ಅವರಿಗೆ ಕಿಂಗ್ ಆಗುವ ಅವಕಾಶ ಇದೆ – ಪಂಚಮಸಾಲಿ ಸ್ವಾಮೀಜಿ: ರಮೇಶ್ ಸಾಹುಕಾರ್ ಮುಂದೊಂದು ದಿನ ಕಿಂಗ್ ಆಗಲಿದ್ದಾರೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಪವಾಸ ಸತ್ಯಾಗ್ರಹದ ವೇಳೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಮೂಲಕ ರಾಜ್ಯ ಸರ್ಕಾರಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.


Spread the love

Leave a Reply

Your email address will not be published. Required fields are marked *