Posts Slider

Karnataka Voice

Latest Kannada News

ಸಾಲದಿಂದ ಬೇಸತ್ತು ರೈಲು ಹಳಿಗೆ ತಲೆ ಕೊಟ್ಟ ನಾಲ್ವರು

1 min read
Spread the love

ಬೆಳಗಾವಿ: ಸಾಲಗಾರರ ಕಿರುಕುಳದಿಂದ ಬೇಸತ್ತ ಕುಟುಂಬವೊಂದು ರೇಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಸಮೀಪದ ರೇಲ್ವೆಯಲ್ಲಿ ಸಂಭವಿಸಿದೆ.

ಮೃತರನ್ನ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಸಾತಪ್ಪಾ ಅಣ್ಣಪ್ಪ ಸುತಾರ, ಮಹಾದೇವಿ ಸಾತಪ್ಪ ಸುತಾರ @ ಬಡಿಗೇರ, ಸಂತೋಷ ಸಾತಪ್ಪ ಸುತಾರ ಹಾಗೂ ದತ್ತಾತ್ರೇಯ ಸಾತಪ್ಪ ಸುತಾರ ಎಂದು ಗುರುತಿಸಲಾಗಿದೆ.

ತಂದೆ ಸಾತಪ್ಪನ ಸಾಕಷ್ಟು ಸಾಲವನ್ನ ಮಾಡಿಕೊಂಡಿದ್ದು, ಸಾಲ ಮರಳಿಸಲಾಗದೇ ಸಂಕಷ್ಟದಲ್ಲಿದ್ದರು. ಅಷ್ಟೇ ಅಲ್ಲ, ಸಾಲಗಾರರ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛಿದ್ರ ಛಿದ್ರವಾಗಿದ್ದ ದೇಹಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *