Posts Slider

Karnataka Voice

Latest Kannada News

ಲೇಟ್ ಫೀ- ಕರ್ನಾಟಕವಾಯ್ಸ್.ಕಾಂ ವರದಿಗೆ ಡಿಸಿಎಂ ಸ್ಪಂಧನೆ

1 min read
Spread the love

ಧಾರವಾಡ: ಪದವಿ ಕಾಲೇಜುಗಳಲ್ಲಿ ಲೇಟ್ ಫೀ ಹೆಸರಿನಲ್ಲಿ ಹಣ ಪಡೆಯಲಾಗುತ್ತಿದೆ ಎಂಬ ವರದಿಗೆ ಸ್ಪಂಧಿಸಿರುವ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸ್ಪಂಧನೆ ನೀಡಿದ್ದು, ಈ ಬಗ್ಗೆ ಸಾಧ್ಯವಾದಷ್ಟು ಬೇಗನೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಧಾರವಾಡದಲ್ಲಿಂದು ಈ ವಿಷಯದ ಬಗ್ಗೆ ಮಾತನಾಡಿದ ಡಿಸಿಎಂ, ಪದವಿ ವಿದ್ಯಾರ್ಥಿಗಳಿಗೆ ಲೇಟ್ ಫೀ ಎಂದು ಹಣ ಪಡೆಯುತ್ತಿರುವುದನ್ನ ಗಮನಿಸಿ, ಈ ಬಗ್ಗೆ ಬೇಗನೇ ನಿಖರವಾದ ನಿರ್ಧಾರವನ್ನ ತೆಗೆದುಕೊಳ್ಳುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಬಿಎ, ಬಿಕಾಂ ಮತ್ತು ಬಿಸ್ಸಿ ಪ್ರವೇಶಗಳಿಗೆ ಲೇಟ್ ಫೀ ಹೆಸರಿನಲ್ಲಿ 4240 ರೂಪಾಯಿಗಳನ್ನ ಪಡೆಯಲಾಗುತ್ತಿತ್ತು. ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಈ ಪ್ರಯತ್ನ ಸಫಲವಾಗಿದ್ದು, ಬಹುತೇಕ ಎರಡು ದಿನದಲ್ಲಿ ಇದಕ್ಕೊಂದು ಸ್ಪಷ್ಟಣೆಯನ್ನ ಸಚಿವರು ನೀಡಲಿದ್ದಾರೆ.

ಕೊರೋನಾ ಸಮಯದಲ್ಲಿ ಲೇಟ್ ಫೀ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಲವು ಬಡ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂಬ ಅಂಶವನ್ನೂ ಕರ್ನಾಟಕವಾಯ್ಸ್.ಕಾಂ ಸಚಿವರಿಗೆ ತಿಳಿಸುವ ಪ್ರಯತ್ನವನ್ನ ಮಾಡಿತ್ತು.


Spread the love

Leave a Reply

Your email address will not be published. Required fields are marked *