ಕೆಪಿಸಿಸಿ ಅಧ್ಯಕ್ಷ ಡಿಕೆಶಿ-ಸಂತೋಷ ಲಾಡ ಕುಚಿಕು… ಕುಚಿಕು..!
1 min read![](https://karnatakavoice.com/wp-content/uploads/2021/02/WhatsApp-Image-2020-12-18-at-6.37.00-PM-1024x657.jpeg)
ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವುಕುಮಾರ ಹಾಗೂ ಮಾಜಿ ಸಚಿವ ಸಂತೋಷ ಲಾಡ ನಗರದಲ್ಲಿಂದು ಕೆಲವು ಕಾಲ ಒಬ್ಬರಿಗೊಬ್ಬರು ಕೂಡಿಕೊಂಡು ಕುಚಿಕು ಕುಚಿಕು ನಡೆಸಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಕುಚಿಕು ಕುಚಿಕು ಎಕ್ಸಕ್ಲೂಸಿವ್ ದೃಶ್ಯಗಳು..
ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ ಅವರನ್ನ ಶಿರಾ ಉಪಚುನಾವಣೆಯ ಉಸ್ತುವಾರಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ, ಬೀದರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಮಿತಿಯಲ್ಲಿ ಸೇರಿಸಿದ್ದನ್ನ ಇಲ್ಲಿ ಸ್ಮರಿಸುವ ಜೊತೆಗೆ, ಇಬ್ಬರು ನಾಯಕರ ಕಾಂಬಿನೇಷನ್ ಉತ್ತಮವಾಗಿ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಸುಮಾರು ಹೊತ್ತು ಇಬ್ಬರು ನಾಯಕರು ಕಾರ್ಯಕರ್ತರಿಗೆ ವಂದನೆ ಸಲ್ಲಿಸುತ್ತಲೇ, ತಮ್ಮಿಬ್ಬರ ಮಾತುಗಳನ್ನ ಮುಂದುವರೆಸಿದ್ದರು. ರಾಜಕೀಯ ಮೊಗಸಾಲೆಯಲ್ಲಿ ಇಷ್ಟೊಂದು ಸರಳವಾಗಿ ಕಾಣಸಿಗುವ ಅಪರೂಪದ ದೃಶ್ಯವಿದಾಗಿತ್ತು.
ಮಾಜಿ ಸಚಿವ ಸಂತೋಷ ಲಾಡ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ಸಂಬಂಧ ಎಷ್ಟೊಂದು ಗಾಢವಾಗಿದೆ ಎಂಬುದನ್ನೂ ತೋರಿಸುವಂತಿತ್ತು, ಇಂದಿನ ಘಟನೆ.