Posts Slider

Karnataka Voice

Latest Kannada News

ಹದಗೆಟ್ಟ ರಸ್ತೆಗಳನ್ನ ಸುಧಾರಿಸಿ- ಸಾರ್ವಜನಿಕರ ಬೇಡಿಕೆಗೆ ಸ್ಪಂಧಿಸಲು ಆಗ್ರಹ

1 min read
Spread the love

ಧಾರವಾಡ: ನಗರದ ಹಲವು ಪ್ರದೇಶ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಇವುಗಳ ಸುಧಾರಣೆಗೆ ಅಧಿಕಾರಿಗಳು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ತಾತ್ಕಾಲಿಕವಾದ ರಸ್ತೆಗಳ ಸುಧಾರಣೆಯೂ ಆಗದೇ ಇದ್ದರೇ, ಸಂಚಾರಿಗಳಿಗೆ ತೀವ್ರ ತೊಂದರೆಯಾಗಲಿದೆ ಎನ್ನುವುದು ಜನರ ನೋವು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. ಜನರ ತೊಂದರೆಯನ್ನ ಆಲಿಸದೇ ಇದ್ದರೇ, ನಾಳೆ ಆಗುವ ಅನಾಹುತಗಳಿಗೆ ನೀವೇ ಕಾರಣರಾಗುತ್ತೀರಿ ಎಂದು ಜನತೆ ಎಚ್ಚರಿಕೆ ನೀಡಿದೆ.

ಪ್ರಮುಖ ರಸ್ತೆಗಳಲ್ಲಿ ಕೆರೆಯಂತಹ ತಗ್ಗುಗಳು ನಿರ್ಮಾಣವಾಗಿದ್ದು, ಕಾರು ಸೇರಿದಂತೆ ಬಹುತೇಕ ವಾಹನಗಳ ಸಂಚಾರ ದುಸ್ತರವಾಗಿದೆ. ಇದನ್ನ ಮನಗಾಣಬೇಕೆಂದು  ಭೀಮಪ್ಪ ಯ ಕಾಸಾಯಿ ಕೇಳಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *