Posts Slider

Karnataka Voice

Latest Kannada News

ನಿವೃತ್ತ ಪೊಲೀಸ್ ಅಧಿಕಾರಿ ಮಗನ ಆಟಾಟೋಪ..!

1 min read
Spread the love

ವಿಜಯಪುರ: ತಮ್ಮೀಡಿ ಸೇವೆಯಲ್ಲಿ ಜನರ ರಕ್ಷಣೆಯ ಬಗ್ಗೆ ಕಾನೂನು ಪಾಠ ಮಾಡುತ್ತಲೇ ಬಂದವರ ಮಗನೋರ್ವ, ಕಾನೂನು ಉಲ್ಲಂಘನೆ, ಸುರಕ್ಷತೆಯನ್ನ ಮರೆತು ಆಟಾಟೋಪ ಮೆರೆದ ಪ್ರಕರಣ ಬೆಳಕಿಗೆ ಬಂದಿದೆ.

ಗುಮ್ಮಟನಗರಿ ವಿಜಯಪುರದಲ್ಲಿ ಯುವಕರು ಡೆಡ್ಲಿ ಡ್ರೈವಿಂಗ್ ಮಾಡಿದ್ದಾರೆ. ಕಾರ ಸ್ಪೀಡಾಗಿ ಹೋಗುವಾಗ ಡ್ರೈವರ್ ಸೀಟ್ ಅದಲು ಬದಲು ಮಾಡಿ ಹುಚ್ಚು ಸಾಹಸಕ್ಕೀಳಿದಿರುವುದನ್ನ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಜಯಪುರ ಯುವಕರ ಹುಚ್ಚಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಕಾರಲ್ಲಿ ಪ್ರವಾಸ ಹೊರಟ ವೇಳೆ ಇಂತಹ ಕೃತ್ಯ ಮಾಡಿಕೊಂಡಿದ್ದಾರೆ. ಇದೇಲ್ಲವನ್ನೂ ಫೇಸ್ಬುಕ್ ನಲ್ಲಿ ಅಮನ ರಾಠೋಡ ಎಂಬಾತ ಅಪ್ಲೋಡ್ ಮಾಡಿಕೊಂಡಿದ್ದಾನೆ.

ವಿಜಯಪುರ ನಗರದ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬುವವರೇ ಸೀಟ್ ಬದಲಾವಣೆ ಮಾಡಿ, ಕಾರು ಚಲಾಯಿಸಿದ್ದು, ಇದರಲ್ಲಿ ವಿನಯ ಹುಲಸಗುಂದ ನಿವೃತ್ತ ಪೊಲೀಸ್ ಅಧಿಕಾರಿಯವರ ಮಗನಾಗಿದ್ದಾರೆ.


Spread the love

Leave a Reply

Your email address will not be published. Required fields are marked *