Posts Slider

Karnataka Voice

Latest Kannada News

ಉಸಿರು ಕೊಟ್ಟವನ “ಸುತ್ತಿಗೆಯೇಟಿಗೆ” ಉಸಿರು ನಿಲ್ಲಿಸಿದ “ಮೂರು ಕಂದಮ್ಮಗಳು” … ಸುಳ್ಳದಲ್ಲಿ ನೀರವಮೌನ…

1 min read
Spread the love

ಹುಬ್ಬಳ್ಳಿ: ಮಾನಸಿಕ ಸ್ಥಿಮಿತ ಕಳೆದುಕೊಂಡ ತಂದೆಯೋರ್ವ ತನ್ನ ಪತ್ನಿ ಸಮೇತ ಮೂವರು ಮಕ್ಕಳ ಮೇಲೆ ಸುತ್ತಿಗೆಯಿಂದ ಹೊಡೆದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ತೀವ್ರವಾಗಿ ಬಳಲಿದ್ದ ಮೂವರು ಮಕ್ಕಳು ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ಸಾವಿಗೀಡಾಗಿವೆ. ಇದರಿಂದ ಸುಳ್ಳ ಗ್ರಾಮದಲ್ಲಿ ನೀರವಮೌನ ಆವರಿಸಿದ್ದು, ಪತ್ನಿಯ ಸ್ಥಿತಿಯು ಗಂಭೀರವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ತಂದೆ, ಸಾವು ಬದುಕಿನ ಹೋರಾಡುತ್ತಿರುವ ಮಹಿಳೆಯ ತಾಯಿ ಹಾಗೂ ಘಟನೆಯ ಬಗ್ಗೆ ಸಂಪೂರ್ಣವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತಾಡಿದ್ದಾರೆ, ಇಲ್ಲಿದೆ ನೋಡಿ…

* ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ಗಂಡನಿಂದ ಹೆಂಡತಿ ಮತ್ತು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ..

* ಘಟನೆಯಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ..

* ಧಾರವಾಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್  ಹೇಳಿಕೆ.

* ಇಂದು ಬೆಳಗಿನ ಜಾವ ಪಕ್ಕೀರಪ್ಪ ಮಾದರ ಹೆಂಡತಿ‌ ಮಕ್ಕಳ ಮೇಲೆ ಸುತ್ತಿಗೆ ಇಂದ ಹಲ್ಲೆ ಮಾಡಿದ್ದಾನೆ.

* ಹಲ್ಲೆ ಮಾಡಿದ ಬಳಿಕ ಆತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

* ಗಾಯಾಳು ಹೆಂಡತಿ ಮುದಕವ್ವ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

* ಹಲ್ಲೆ ಪ್ರಕರಣದಲ್ಲಿ ಈ ವರೆಗೂ ಪಕ್ಕೀರಪ್ಪ ಮಾದರ ಮಕ್ಕಳಾದ 8 ವರ್ಷದ ಶ್ರಾವಣಿ,6 ವರ್ಷದ ಶ್ರೇಯಸ್,4 ವರ್ಷದ ಸೃಷ್ಟಿ ಸಾವು..

* ಘಟನೆಗೆ ಕಾರಣ ಏನು ಅನ್ನೋದ ತನಿಖೆ ನಡೆಯುತ್ತಿದೆ.

* ಘಟನೆಗೆ ಕಾರಣ ಈ ಸದ್ಯ ಹೇಳೋಕಾಗಲ್ಲ..

* ಸದ್ಯ ಪಕ್ಕೀರಪ್ಪ ಮಾದರ ಹೆಂಡತಿ ಮುದಕವ್ವ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

* ಬೆಳಗ್ಗೆ ಐದು‌ಗಂಟೆಗೆ ಘಟನೆ ನಡೆದಿದೆ..

* ಹೆಂಡತಿ‌ ಮಲಗಿದ ಕೋಣೆಯಲ್ಲಿಯೇ ಅಟ್ಯಾಕ್ ‌ಮಾಡಿದ್ದು ಗಮನಕ್ಕೆ ಬಂದಿದೆ.


Spread the love

Leave a Reply

Your email address will not be published. Required fields are marked *