Posts Slider

Karnataka Voice

Latest Kannada News

ಅವಳಿವತ್ತು ಕಾಣೆಯಾಗಿದ್ದಾಳೆ: ನಿಮಗೆ ಕಂಡ್ರೇ ಪ್ಲೀಸ್ ತಿಳಿಸಿ

1 min read
Spread the love

ಧಾರವಾಡ: ಆಕೆ ಚೂರಾದರೂ ಆರೋಗ್ಯದಲ್ಲಿ ಚೇತರಿಕೆ ಕಂಡರೇ ಸಾಕು ಎಂದುಕೊಂಡು ನಗರದ ಮಾನಸಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿ, ದೇವರನ್ನ ನೆನೆಯುತ್ತಿದ್ದ ಕುಟುಂಬದವರೀಗ ಬೀದಿ ಬೀದಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ನಿಮಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿರುವುದು.

ಈ ಭಾವಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ಬಸಮ್ಮ ಶರಣಗೌಡ ಮುಧೋಳ. ಮೂಲತಃ ಯಾದಗಿರಿ ಜಿಲ್ಲೆಯ ನರಸಿಂಗಪೇಟೆ ಗ್ರಾಮದವರು. ಕೆಲವು ದಿನಗಳಿಂದ ಮಾನಸಿಕವಾಗಿ ಸರಿಯಿಲ್ಲದ ಕಾರಣ, ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿತ್ತು.

ಆದರೆ, ಇಂದು ಆಸ್ಪತ್ರೆಯಿಂದಲೇ ಬಸಮ್ಮ ಕಾಣೆಯಾಗಿದ್ದಾರೆ. ಸುಮಾರು 25 ವರ್ಷದ ಈ ಮಹಿಳೆಯ ಬಗ್ಗೆ ಮಾಹಿತಿ ಕೊಟ್ಟರೇ, ಆ ಕುಟುಂಬಕ್ಕೆ ಚೂರು ನೆಮ್ಮದಿಯನ್ನ ನೀಡಿದ ಖುಷಿ ನಿಮಗೂ ಸಿಗಬಹುದು. ಹಾಗಾಗಿಯೇ, ಇಲ್ಲಿ ಎಲ್ಲ ಮಾಹಿತಿಯನ್ನ ನೀಡಲಾಗಿದೆ. ಎಲ್ಲಿಯಾದರೂ ಕಂಡರೇ ಈ ಮೊಬೈಲ್ ಸಂಖ್ಯೆಗೆ ರಿಂಗಣಿಸಿ..

ಸಂಪರ್ಕಿಸುವ ವಿಳಾಸ ಮಲ್ಲಿಕಾರ್ಜುನ-8197267085


Spread the love

Leave a Reply

Your email address will not be published. Required fields are marked *