Posts Slider

Karnataka Voice

Latest Kannada News

ಮಹಾದೇವ ಸಾಹುಕಾರನ ಸ್ಥಿತಿ ಕ್ರಿಟಿಕಲ್- ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ

1 min read
Spread the love

ವಿಜಯಪುರ: ಕಳೆದ ಎರಡು ದಿನಗಳ ಹಿಂದೇ ನಡೆದ ಸಾಹುಕಾರ್ ಮೇಲಿನ ಗುಂಡಿನ ದಾಳಿಗೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೀಮಾತೀರದ ಹಂತಕ ಮಹಾದೇವ ಭೈರಗೊಂಡಗೆ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದು, ಆರೋಗ್ಯ ಸ್ಥಿತಿ ಕ್ರಿಟಿಕಲ್ ಇದ್ರೂ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯ ರಾಜೇಶ ಹೊನ್ನುಟಗಿ ಪ್ರತಿಕ್ರಿಯೆ ನೀಡಿದರು.

ಮಹಾದೇವ ಭೈರಗೊಂಡ ಅಲಿಯಾಸ್ ಮಹಾದೇವ ಸಾವುಕಾರ ಸೋಮವಾರ ಗುಂಡಿನ ದಾಳಿಗೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಶರ್ಸ್ತಚಿಕಿತ್ಸೆ ಮೂಲಕ ಎರಡು ಗುಂಡುಗಳನ್ನು ವೈದ್ಯರು ಹೊರತೆಗೆದಿದ್ದರು.

ಸದ್ಯ ರಕ್ತದೊತ್ತಡ, ಮಧುಮೇಹ ಸ್ಥಿರವಾಗಿದೆ. ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದು, ಭೈರಗೊಂಡರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಚೇತರಿಕೆಗೆ ಇನ್ನೂ ಸಮಯಬೇಕು ಎಂದು ಬಿಎಲ್‌ಡಿಇ ಆಸ್ಪತ್ರೆ ಮೇಲಾಧಿಕಾರಿ ಡಾ.ರಾಜೇಶ ಹೊನ್ನುಟಗಿ ಮಾಹಿತಿ ನೀಡಿದ್ದು, ಅಲ್ಲದೇ, ಓರ್ವ ಆಸ್ಪತ್ರೆಗೆ ಬರುವ ಮುನ್ನವೆ ಹಾಗೂ ಮತ್ತೋರ್ವ ಮರುದಿನ ಅಸುನೀಗಿದ್ದಾರೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ತಂಡವನ್ನ ರಚನೆ ಮಾಡಿದ್ದು, 1500 ಪೊಲೀಸರಿಂದ ಕಾರ್ಯಾಚರಣೆ ನಡೆಯುತ್ತಿದೆ.


Spread the love

Leave a Reply

Your email address will not be published. Required fields are marked *