Posts Slider

Karnataka Voice

Latest Kannada News

ಕೆಎಸ್ಸಾರ್ಟಿಸಿ ಡ್ರೈವರ್ ನೇಣಿಗೆ ಶರಣು: ಬಸ್ ನಾಪತ್ತೆ

1 min read
Spread the love

ಬೀದರ: ಚುನಾವಣೆಯ ನಿಮಿತ್ತವಾಗಿ ಬಸ್ ತೆಗೆದುಕೊಂಡು ಹೋಗಿದ್ದ ಬಸ್ ಚಾಲಕ ನೇಣಿಗೆ ಶರಣಾಗಿ ಶವವಾಗಿ ದೊರಕಿದ್ದು, ತೆಗೆದುಕೊಂಡು ಹೋಗಿದ್ದ ಬಸ್ ನಾಪತ್ತೆಯಾದ ಘಟನೆ ಬೀದರನಲ್ಲಿ ಸಂಭವಿಸಿದೆ.

ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ನಿವಾಸಿಯಾಗಿರುವ ಚಾಲಕ ಓಂಕಾರ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು, ಬೀದರ್ ಬಸ್ ಡಿಪೋದ ರೆಸ್ಟ್ ರೂಮ್ ದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನೌಕರನಾಗಿದ್ದ ಓಂಕಾರ, ಕಳೆದ 8 ವರ್ಷದಿಂದ ಡ್ರೈವರ್ ಆಗಿ ಕೆಎಸ್ ಆರ್ ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೇಲಾಧಿಕಾರಿಗಳ ಕಿರುಕುಳವೋ ಅಥವಾ   ವೈಯಕ್ತಿಕ ಕಾರಣಕ್ಕೆ  ಡ್ರೈವರ್ ಆತ್ಮಹತ್ಯೆ  ಮಾಡಿಕೊಂಡಿದ್ದನೆಂದು ಪೊಲೀಸರು ತನಿಖೆಯಿಂದ ಪತ್ತೆ ಹಚ್ಚಬೇಕಿದೆ.

ನಿನ್ನೆ ಸಂಜೆ ಚುನಾವಣೆ ನಿಮಿತ್ತವಾಗಿ ಬಸ್ ನಂಬರ್ KA-32 F-926 ಬಸ್ ತೆಗೆದುಕೊಂಡು ಹೋಗಿದ್ದು, ಚಾಲಕನ ಶವ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಗಳು ಬಸ್ ಹುಡುಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *