Posts Slider

Karnataka Voice

Latest Kannada News

ಹುಬ್ಬಳ್ಳಿಯ ಒಂದೇ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಶವಗಳು… !

1 min read
Spread the love

ಹುಬ್ಬಳ್ಳಿ: ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಿಕ್ಕ 4 ಮೃತದೇಹಗಳ ಬಗ್ಗೆ ಪೊಲೀಸರಿಗೆ ಇನ್ನು ಯಾವುದೇ ರೀತಿಯಾದ ಮಾಹಿತಿ ಸಿಕ್ಕಿಲ್ಲ.

ಹುಬ್ಬಳ್ಳಿಯ ಬಸ್ ನಿಲ್ದಾಣದ ಬಳಿಯಲ್ಲಿ ಸುಮಾರು 35 ವಯಸ್ಸಿನ ವ್ಯಕ್ತಿ ವಿಪರೀತ ಕುಡಿತದಿಂದ ಮೃತಪಟ್ಟಿದ್ದ, ಅದೇ ರೀತಿ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಕೂಡಾ 25 ವಯಸ್ಸಿನ ವ್ಯಕ್ತಿಯೊಬ್ಬ ವಿಪರೀತ ಸಾರಾಯಿ ಕುಡಿತದಿಂದ ಮೃತಪಟ್ಟಿದ್ದ..

ಒಟ್ಟು ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಲ್ಕು ಅನಾಥ ಶವಗಳು ಸಿಕ್ಕಿದ್ದು ಇನ್ನು ಕೂಡಾ ಮರಣೋತ್ತರ ಪರೀಕ್ಷೆ ನಡೆಯದೆ ಶವವನ್ನು ಹುಬ್ಬಳ್ಳಿಯ ಕಿಮ್ಸ್ ಶವಾಗಾರದಲ್ಲಿ ಇಡಲಾಗಿದೆ. ಇವರ ಸಂಬಂಧಿಕರು ಬರಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.

ಒಂದು ವೇಳೆ ಯಾರಾದರೂ ಸಂಬಂಧಿಗಳು ಬರದೇ ಹೋದಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿ ಮಹಾನಗರ ಪಾಲಿಕೆಗೆ ಶವವನ್ನು ಹಸ್ತಾಂತರ ಮಾಡಿ ಅಂತ್ಯಕ್ರಿಯೆ ಮಾಡಲಿದ್ದಾರೆ.


Spread the love

Leave a Reply

Your email address will not be published. Required fields are marked *