Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ವ್ಯಕ್ತಿ ಅಪಹರಣ: ಲಕ್ಷ ಲಕ್ಷ ದೋಚಿದ್ದವರನ್ನ ಹೆಡಮುರಿಗೆ ಕಟ್ಟಿದ ಟೌನ್ ಸ್ಟೇಶನ್ ಪೊಲೀಸ್ರು..!

1 min read
Spread the love

ಹುಬ್ಬಳ್ಳಿ: ಬೈಕ್ ಸಮೇತ ವ್ಯಕ್ತಿಯನ್ನಅಪಹರಣ ಮಾಡಿ ಊರೂರು ಸುತ್ತಿಸಿ ಮತ್ತೆ ಹುಬ್ಬಳ್ಳಿಗೆ ಕರೆತಂದು ಹಣ ದೋಚಿದ್ದ ತಂಡವನ್ನ ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರು ಆಯುಕ್ತರು ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ಹುಬ್ಬಳ್ಳಿಯ ವಾಸುದೇವ ಮಹಾದೇವಪ್ಪ ಪಾರ್ವತಿಯವರ ಎಂಬುವವರನ್ನ ಜನೇವರಿ 13ರಂದು ನಗರದಿಂದ ಬೈಕ್ ಸಮೇತ ಅಪಹರಣ ಮಾಡಿ, ಆತನಿಂದ ಮೊಬೈಲ್ ಹಾಗೂ 72405 ರೂಪಾಯಿ ದೋಚಿಕೊಂಡು, ಮತ್ತೆ ಕಾರಿನಲ್ಲಿ ಹಾಕಿಕೊಂಡು ಊರೂರು ಅಲೆಸಿದ್ದ ಆರು ಆರೋಪಿಗಳನ್ನ ಬಂಧನ ಮಾಡಲಾಗಿದೆ.

ಕಾರಿನಲ್ಲಿ ಅಲೆದಾಡಿ ಮತ್ತೆ ಹುಬ್ಬಳ್ಳಿಗೆ ಬಂದು 5ಲಕ್ಷ ತರುವಂತೆ ಹೇಳಿ ಹಣ ಪಡೆದು, ಯಾರಿಗಾದರೂ ಹೇಳಿದರೇ ಚಾಕು ಹಾಕುತ್ತೇವೆ ಎಂದು ಹೇಳಿ ಪರಾರಿಯಾಗಿದ್ದರ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಹರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯ ಶಿವರಾಜ ನಿಂಗಪ್ಪ ನೇಗುಣಿ, ಶೇಖರ ಗಂಗಾಧರ ಬಾರಕೇರ, ಕಲಘಟಗಿಯ ಶಂಕರ ಸುರೇಶ ಕಟಾವಕರ, ಹುಬ್ಬಳ್ಳಿ ಆನಂದನಗರದ ಪ್ರಶಾಂತ ಅಲಿಯಾಸ್ ಕಾಳ್ಯಾ ಮಹಾದೇವಪ್ಪ ಬೀರಣ್ಣವರ, ಧಾರವಾಡ ಹೆಬ್ಬಳ್ಳಿ ಅಗಸಿಯ ನಾಗಪ್ಪ ಅಲಿಯಾಸ್ ಮಂಜು ಚಿದಂಬರ ಯಲಿಗಾರ ಹಾಗೂ ಧಾರವಾಡ ಸವದತ್ತಿ ರಸ್ತೆಯ ಮಹಾಂತೇಶ ಗುರುನಾಥ ಇದ್ಲಿ ಎಂಬುವವರನ್ನ ಬಂಧನ ಮಾಡಲಾಗಿದೆ.

ಆರೋಪಿತರಿಂದ 1ಲಕ್ಷ 50 ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಕೆ ಮಾಡಿದ ಚಾಕುಗಳನ್ನ ಜಪ್ತಿ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *