Posts Slider

Karnataka Voice

Latest Kannada News

ಫೆಬ್ರುವರಿ 16ಕ್ಕೆ ಧಾರವಾಡ ಮುರುಘಾಮಠ ಜಾತ್ರೆ..

1 min read
Spread the love

ಧಾರವಾಡ: ಕೊರೋನಾ ಮಹಾಮಾರಿಯ ನಡುವೆ ಜಾತ್ರೆ, ಜನ ಕೂಡುವುದು ಕಡಿಮೆಯಾಗಿರುವ ಬೆನ್ನಲ್ಲೇ ಪ್ರಸಿದ್ಧ ಧಾರವಾಡ ಮುರುಘಾಮಠದ ಶ್ರೀ ಶಿವಯೋಗಿಗಳ ರಥೋತ್ಸವ ಫೆಬ್ರುವರಿ 16ರಂದು ಜರುಗಲಿದೆ.

ಫೆಬ್ರುವರಿ 7ರಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಫೆಬ್ರುವರಿ 16ರ ಸಂಜೆ 4 ಗಂಟೆಗೆ ಶಿವಯೋಗಿಗಳ ರಥೋತ್ಸವ ಜರುಗಲಿದೆ ಎಂದು ಶ್ರೀ ಶಿವಯೋಗಿಶ್ವರ ಜಾತ್ರಾ ಉತ್ಸವ ಸಮಿತಿ ತಿಳಿಸಿದೆ.

ಸಂಪ್ರದಾಯದಂತೆ ಕತೃ ಗದ್ದುಗೆಗೆ ಶ್ರೀ ಶಿವಯೋಗಿಗಳವರ ಪಾದಕ್ಕೆ ಹಾಗೂ ಶ್ರೀ ಮೃತ್ಯುಂಜಯ ಅಪ್ಪಗಳವರ ಗದ್ದುಗೆ, ಶ್ರೀ ಮಹಾಂತಪ್ಪಗಳವರ ಗದ್ದುಗೆಗೆ ಪ್ರತಿನಿತ್ಯ ರುದ್ರಾಭಿಷೇಕ, ಪಾದಪೂಜೆ ಮತ್ತು ಗಣಾರಾಧನೆ ನಡೆಯಲಿದ್ದು, ಭಕ್ತರು ಭಾಗವಹಿಸುವಂತೆ ಕೋರಲಾಗಿದೆ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿ ಭಕ್ತರಿಗೆ ಪ್ರಸಾಧದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಕೃಪಾಶೀರ್ವಾದಕ್ಕೆ ಒಳಗಾಗಬೇಕೆಂದು ಸಮಿತಿ ಹೇಳಿದೆ.


Spread the love

Leave a Reply

Your email address will not be published. Required fields are marked *