Posts Slider

Karnataka Voice

Latest Kannada News

ಮಣ್ಣಲ್ಲಿ ಮಣ್ಣಾದ ಶತಾಯುಣಿ ಮರಿಬಸಮ್ಮ- ಮಾಜಿ ಸಿಎಂ ಪತ್ನಿಗೆ ಅಂತಿಮ ನಮನ ಸಲ್ಲಿಕೆ

1 min read
Spread the love

ಬಾಗಲಕೋಟೆ: ಸ್ವಾತಂತ್ರ್ಯ ಹೋರಾಟಗಾರ್ತಿ, ಮಾಜಿ ‌ಮುಖ್ಯಮಂತ್ರಿ ದಿವಂಗತ ಎಸ್.ಆರ್.ಕಂಠಿ ಅವರ ಧರ್ಮಪತ್ನಿ ಶತಾಯುಣಿ ಮರಿಬಸಮ್ಮ (104)ಅವರ ಅಂತಿಮ ಸಂಸ್ಕಾರ ಸಾವಿರಾರೂ ಜನರ ನಡುವೆ ನೆರವೇರಿತು.

ಬಾಗಲಕೋಟೆ‌‌ ಜಿಲ್ಲೆಯ ಇಳಕಲ್ ನಗರದ ಶ್ರೀ ವಿಜಯಮಹಾಂತೇಶ ಶ್ರೀಗಳ ತಪೋವನದ ಸಮೀಪ ದಿವಂಗತ ಎಸ್.ಆರ್.ಕಂಠಿ ಅವರ ಸಮಾಧಿ ಪಕ್ಕದಲ್ಲೇ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಇಳಕಲ್ ನ ಶ್ರೀ ಗುರುಮಹಾಂತ ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಧಾರ್ಮಿಕ ವಿಧಿವಿಧಾನಗಳಿಂದ ಕ್ರಿಯಾವಿಧಿ ನೆರವೇರಿಸಲಾಯಿತು.

ಕಳೆದ ದಿನವಷ್ಟೇ ಬೆಳಗಾವಿ ಕಿತ್ತೂರಿನಲ್ಲಿ ಮರಿಬಸಮ್ಮ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಇಂದು ಮಧ್ಯಾಹ್ನ ಬೆಳಗಾವಿಯಯ ಕಿತ್ತೂರಿನಿಂದ ಇಳಕಲ್‌ನಗರಕ್ಕೆ ಮೃತರ ಪಾರ್ಥೀವ ಶರೀರವನ್ನ ತರಲಾಗಿತ್ತು. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್, ವಿವಿಧ ಮಠಗಳ ಮಠಾಧೀಶರು ಅಭಿಮಾನಿಗಳು ಆಪ್ತ ಬಳಗ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ರು.


Spread the love

Leave a Reply

Your email address will not be published. Required fields are marked *