ಭೀಮಾ ತೀರದ ಫೈರಿಂಗ್- ಸಾವುಕಾರ ಡ್ರೈವರ್ ಸಾವು
1 min read![](https://karnatakavoice.com/wp-content/uploads/2021/02/WhatsApp-Image-2020-11-02-at-4.50.38-PM-1024x768.jpeg)
ವಿಜಯಪುರ: ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಫೈರಿಂಗ್ ಪ್ರಕರಣದಲ್ಲಿ ಗಾಯಗೊಂಡಿದ್ದ ಮಹದೇವ ಬೈರಗೊಂಡ ಅಲಿಯಾಸ್ ಮಹದೇವ ಸಾವುಕಾರನ ಚಾಲಕ ಸಾವಿಗೀಡಾಗಿದ್ದಾನೆ.
ಟಿಪ್ಪರ್ ಮೂಲಕ ಅಪಘಾತ ಮಾಡಿಸಿ ಮಹದೇವ ಸಾವುಕಾರನ ಮೇಲೆ ಫೈರಿಂಗ್ ನಡೆದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭೀಮಾತೀರದ ಸಾಹುಕಾರ್ ಕಾರ್ ಚಾಲಕ ಲಕ್ಷ್ಮಣ ದಿಂಡೋರೆ (27) ಸಾವಿಗೀಡಾಗಿದ್ದಾನೆ.
ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಶೂಟೌಟ್ ನಡೆದಿತ್ತು. ಲಕ್ಷ್ಮಣ ದಿಂಡೋರೆಗೂ ಒಂದು ಗುಂಡು ತಗುಲಿತ್ತು. ಅತಿಯಾದ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾನೆ.
ನಿನ್ನೆ ಘಟನೆ ನಡೆದ ಸಮಯದಲ್ಲಿ ಬೈರಗೊಂಡ ಸಾವುಕಾರನ ಮ್ಯಾನೇಜರ ಬಾಬುರಾಯ ಕಂಚನಾಳಕರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.