Posts Slider

Karnataka Voice

Latest Kannada News

ಮಾಜಿ ಸಚಿವ ವಿನಯ ಕುಲಕರ್ಣಿ-ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ವಿಸ್ತರಣೆ..!

1 min read
Spread the love

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಮಾವನವರಾದ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನವನ್ನ ಮತ್ತೆ ಹದಿನಾಲ್ಕು ದಿನಗಳವರೆಗೆ ಮುಂದೂಡಿ ಆದೇಶ ಮಾಡಲಾಗಿದೆ.

ನವೆಂಬರ್ 5ರಂದು ಬಂಧನವಾಗಿರುವ ವಿನಯ ಕುಲಕರ್ಣಿ ಹಾಗೂ ಕೆಲವು ದಿನಗಳ ಹಿಂದೆ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಚಂದ್ರಶೇಖರ ಇಂಡಿಯವರನ್ನ ಕಾರಾಗೃಹದಲ್ಲಿ ಇಡಲಾಗಿದ್ದು, ಇಂದು ಮತ್ತೆ 14 ದಿನದ ನ್ಯಾಯಾಂಗ ಬಂಧನವನ್ನ ಮುಂದೂಡಿ ಆದೇಶಿಸಲಾಗಿದೆ.

ಧಾರವಾಡ ಜಿಲ್ಲೆಯ ಮೂರನೇಯ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಗಂಗಾಧರ ಅವರು ಇಂದು  ಆದೇಶ ನೀಡಿದ್ದಾರೆ. ಈ ಆದೇಶದಿಂದ ಮತ್ತೆ ಫೆಬ್ರುವರಿ 19ರ ವರೆಗೆ ನ್ಯಾಯಾಂಗ ಬಂಧನ ಮುಂದುವರಿದೆ.

ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಗ್ಗೆ ಈಗಾಗಲೇ ಸಿಬಿಐ ಜಾರ್ಜಸೀಟ್ ಸಲ್ಲಿಕೆ ಮಾಡಿದ್ದು, ಜಾರ್ಜಸೀಟಿನಲ್ಲಿ ಯಾವ ಯಾವ ಅಂಶಗಳನ್ನ ದಾಖಲು ಮಾಡಲಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.


Spread the love

Leave a Reply

Your email address will not be published. Required fields are marked *