ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲೆಸಿದ ಗುತ್ತಿಗೆದಾರರು: ಕಮೀಟ್ ಮೆಂಟ್ ಮಾಡಿಕೊಂಡ “ಐ”ವರು…!
1 min read![](https://karnatakavoice.com/wp-content/uploads/2021/10/unnamed.jpg)
ಹುಬ್ಬಳ್ಳಿ: ಇತ್ತೀಚಿಗೆ ಜರುಗಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲ ಮಹಾನಗರ ಪಾಲಿಕೆ ಸದಸ್ಯರು, ಇನ್ನೂ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಕೆಲ ಗುತ್ತಿಗೆದಾರರೊಂದಿಗೆ ವ್ಯವಹಾರ ಮಾಡಿಕೊಂಡಿದ್ದಾರೆಂಬ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.
![](https://karnatakavoice.com/wp-content/uploads/2021/10/images-10.jpeg)
ಗುತ್ತಿಗೆದಾರರಿಂದ ತಲಾ ಹತ್ತು ಲಕ್ಷ ರೂಪಾಯಿಗಳಂತೆ ಹಣ ಪಡೆದಿರುವ ಹುಬ್ಬಳ್ಳಿಯ ಐವರು ಪಾಲಿಕೆ ಸದಸ್ಯರು ಗುತ್ತಿಗೆದಾರರಿಗೆ ಸಂಪೂರ್ಣ ಸಹಕರಿಸುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಐವರೂ ಪಾಲಿಕೆ ಸದಸ್ಯರೆಲ್ಲರೂ ನೂತನವಾಗಿ ಆಯ್ಕೆಗೊಂಡವರಾಗಿದ್ದಾರೆ ಎನ್ನಲಾಗುತ್ತಿದೆ. ಕೆಲ ಪರಾಭವಗೊಂಡ ಮಹಾನಗರ ಪಾಲಿಕೆ ಸಧಸ್ಯರು ಗುತ್ತಿಗೆದಾರರೊಂದಿಗಿನ ವ್ಯವಹಾರ ಕುದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ.
ಈ ಮೂಲಕ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲೆಸಿ ಸದಸ್ಯರ ತಲೆಗೆ ಹಾಕಿರುವುದು ಗುತ್ತಿಗೆದಾರರ ಕಸುಬುತನವನ್ನ ತೋರಿಸುತ್ತದೆ ಎಂದು ಹೇಳಲಾಗಿದ್ದು, ಮೊದಲೇ ಹಣವನ್ನ ನೀಡಿ, ಕಡಿಮೆ ರೇಟ್ ಲ್ಲಿ ವ್ಯವಹಾರ ಕುದುರಿಸಿಕೊಂಡಿದ್ದಾರೆಂಬ ಕುಹಕವೂ ಕೇಳಿ ಬರುತ್ತಿವೆ.