Posts Slider

Karnataka Voice

Latest Kannada News

ಐಜಿಪಿ ರಾಘವೇಂದ್ರ ಸುಹಾಸ ಸೇರಿ 121 ಪೊಲೀಸ್ ಅಧಿಕಾರಿಗಳಿಗೆ “ಸಿಎಂ ಮೆಡಲ್”

1 min read
Spread the love

ಬೆಂಗಳೂರು: ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಸೇರಿದಂತೆ 121 ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.

ಪದಕ ಪಡೆದವರ ಲಿಸ್ಟ್ ಇಲ್ಲಿದೆ ನೋಡಿ..

CM Medal 2019

ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಕರ್ತವ್ಯ ನಿರ್ವಹಿಸಿದ್ದ ರಾಘವೇಂದ್ರ ಸುಹಾಸ, ಬೆಳಗಾವಿ ಜಿಲ್ಲೆಯ ವರಿಷ್ಠಾಧಿಕಾರಿ ಐಪಿಎಸ್ ಲಕ್ಷ್ಮಣ ನಿಂಬರಗಿ, ಬಾಗಲಕೋಟೆ ಜಿಲ್ಲೆಯ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನಕುಮಾರ ಜಿ.ಕೆ, ಶಿವಮೊಗ್ಗ ಜಿಲ್ಲೆಯ ಕೆ.ಎಂ.ಶಾಂತಕುಮಾರ ಸೇರಿದಂತೆ ಒಟ್ಟು 121 ಜನರಿಗೆ ಸಿಎಂ ಮೆಡಲ್ ದೊರಕಿದೆ.

ಅಶೋಕ‌ನಗರ ಸಂಚಾರಿ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಮೀನಾಕ್ಷಿ ಹೆಚ್ ಎಂ ಅವರು ಮುಖ್ಯಮಂತ್ರಿ ಪದಕ್ಕಾಗಿ‌ ಆಯ್ಕೆಗೊಂಡಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿ, ಮಹತ್ತರವಾದ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದವರನ್ನ ಸಿಎಂ ಮೆಡಲ್ ಗೆ ಆಯ್ಕೆ ಮಾಡುತ್ತಾ ಬರಲಾಗಿದೆ.

ಮುಧೋಳ ಪಿಎಸೈ ಶ್ರೀಶೈಲ ಬ್ಯಾಕೋಡ, ಬದಾಮಿ ಪಿಎಸ್ಐ ಪ್ರಕಾಶ ಬಣಕಾರ, ಬಾಗಲಕೋಟೆ ಪಿಎಸ್ಐ ಪರಶುರಾಮ ಮನಗೂಳಿಯವರಿಗೂ ಮುಖ್ಯಮಂತ್ರಿ ಪದಕ ಲಭಿಸಿದೆ.

ಧಾರವಾಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯ ಮುಖ್ಯಪೇದೆ ಹನಮಂತ ಸೋಮನಕಟ್ಟಿಯವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.


Spread the love

Leave a Reply

Your email address will not be published. Required fields are marked *