Posts Slider

Karnataka Voice

Latest Kannada News

ಕಂಡ ಕಂಡ ಜಿಲ್ಲೆಗಳಲ್ಲಿ ವಂಚಿಸಿದ್ದ ಆರೋಪಿಯನ್ನ ಬಂಧಿಸಿದ ಇನ್ಸಪೆಕ್ಟರ್ ಪ್ರಭುಗೌಡ ಟೀಂ..!

1 min read
Spread the love

ಉತ್ತರಕನ್ನಡ: ಬ್ಯಾಂಕ್ ಎಟಿಎಂಗಳಲ್ಲಿ ಸಹಾಯ ನೆಪದಲ್ಲಿ ಅವರದ್ದೇ ಎಟಿಎಂ ತೆಗೆದುಕೊಂಡು ಹೋಗಿ ವಂಚನೆ ಮಾಡುತ್ತಿದ್ದ ಅಂತರ್ ಜಿಲ್ಲಾ ವಂಚಕನನ್ನ ಬಂಧನ ಮಾಡುವಲ್ಲಿ ಮುಂಡಗೋಡ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಗಾಗಲೇ ಮಂಡ್ಯ ಹಾಗೂ ತುಮಕೂರ ಜಿಲ್ಲೆಯಲ್ಲಿ ಎಂಟು ವಂಚನೆ ಮಾಡಿ ಪೊಲೀಸರಿಂದ ಬಂಧನವಾಗಿ ಜಾಮೀನಿನ ಮೇಲೆ ಹೊರಗಿರುವ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಿರೇಮೊರಬ ಗ್ರಾಮದ ಗಿರೀಶ ಸಿದ್ದಪ್ಪ ಮುನಿಯಪ್ಪನವರ ಎಂಬಾತನನ್ನೇ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಗಿರೀಶನ ವಿಚಾರಣೆಯಲ್ಲಿ ಮತ್ತೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಆತ ಬಳಕೆ ಮಾಡುತ್ತಿದ್ದ ಬೈಕ್ ಕೂಡಾ ದಾವಣಗೆರೆಯಲ್ಲಿ ಕಳ್ಳತನ ಮಾಡಿದ್ದೆಂದು ಗೊತ್ತಾಗಿದೆ. ಆರೋಪಿಯಿಂದ 47500 ರೂಪಾಯಿ ಹಾಗೂ ಬೈಕನ್ನ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರಿನಾಥ, ಶಿರಸಿ ಡಿಎಸ್ಪಿ ರವಿ ನಾಯಕ  ಮಾರ್ಗದರ್ಶನದಲ್ಲಿ ಮುಂಡಗೋಡ ಠಾಣೆಯ ಇನ್ಸಪೆಕ್ಟರ್ ಪ್ರಭುಗೌಡ. ಡಿ.ಕೆ ನೇತೃತ್ವದಲ್ಲಿ  ಪಿಎಸ್ಐಗಳಾದ ಬಸವರಾಜ ಮಬನುರ, ಬಾಬುದ್ದಿನ್, ಎಎಸ್ಐಗಳಾದ ಅಶೋಕ ರಾಠೋಡ. ಕೆ.ಎನ್.ಘಟಕಾಂಬಳೆ ಸಿಬ್ಬಂದಿಗಳಾದ ವಿನೋದಕುಮಾರ. ಜಿ. ಬಿ, ಅರುಣಕುಮಾರ ಬಾಗೇವಾಡಿ, ಭಗವಾನ ಗಾಂವಕರ, ರಾಘವೇಂದ್ರ ನಾಯ್ಕ, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *