Posts Slider

Karnataka Voice

Latest Kannada News

ಧಾರವಾಡ ZP ಸಿಇಓ ಎತ್ತಂಗಡಿ: ಹೊಸಬರ ಆಗಮನ

1 min read
Spread the love

ಬೆಂಗಳೂರು: ರಾಜ್ಯ ಸರಕಾರ ಐವರು ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದು, ಹಲವು ವರ್ಷಗಳಿಂದ ಧಾರವಾಡ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡಾ.ಬಿ.ಸಿ.ಸತೀಶ ಅವರನ್ನ  ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಆಗಿದ್ದ ಡಾ.ಬಿ.ಸಿ.ಸತೀಶರನ್ನ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಕಲ್ಯಾಣ ಕರ್ನಾಟಕದ ವಲಯ ಅಭಿವೃದ್ಧಿ ಕೇಂದ್ರದಲ್ಲಿದ್ದ ಸುಶೀಲಾ ಬಿ ಅವರನ್ನ ವರ್ಗಾವಣೆ ಮಾಡಲಾಗಿದೆ.

ಅದರಂತೆ ನಳಿನಿ ಅತುಲ್, ಪ್ರೀತಿ ಗೆಹ್ಲೋಟ್, ವಸಂತಕುಮಾರ ಪಿ ಅವರುಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಧಾರವಾಡದಲ್ಲಿ ಸತೀಶ ಅವರು ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಕಳೆದ ಮಾರ್ಚನಲ್ಲೇ ವರ್ಗಾವಣೆ ಆಗುತ್ತದೆ ಎಂದು ಹೇಳಲಾಗಿತ್ತಾದರೂ, ಕೊರೋನಾದಿಂದ ಈಗ ವರ್ಗಾವಣೆಯಾಗಿದೆ.


Spread the love

Leave a Reply

Your email address will not be published. Required fields are marked *