ಯೋಗದಿಂದ ಕೊರೋನಾ ಮಾಯ- ಶ್ರೀ ಬಸವಾನಂದ ಗುರೂಜಿ…!

ಹುಬ್ಬಳ್ಳಿ: ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ಆಯೋಜಿಸಿದ ಯೋಗ ಶಿಬಿರದ ಸಮಾರೋಪ ಸಮಾರಂಭ ನಗರದ ಮೂರುಸಾವಿರಮಠ ಆವರಣದಲ್ಲಿ ಶ್ರೀ ಬಸವಾನಂದ ಗುರೂಜಿ ಅವರಿಂದ ಛಾಯಾಗ್ರಾಹಕರಿಗೆ 2ನೇ ತಂಡದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಜರುಗಿತು.

ಸುಮಾರು ನೂರಕ್ಕೂ ಹೆಚ್ಚು ಛಾಯಾಗ್ರಾಹಕರು ಮತ್ತು ಅವರ ಕುಟುಂಬದ ವರ್ಗದವರು ಭಾಗವಹಿಸಿ, ಯೋಗ ಅಂದರೇನು, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ ಸಮಗ್ರವಾಗಿ ಕಲಿತಿದ್ದಾರೆ. ಕೊರೋನ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಮತ್ತು ಛಾಯಾಗ್ರಾಹಕರು ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಯೋಗ ಶಿಬಿರ ಪ್ರಾರಂಭವಾಗಿತ್ತು.
ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ಮತ್ತು ವಿಶ್ವಚೇತನ ಯೋಗ ಸಂಶೋಧನ ಕೇಂದ್ರ ಹುಬ್ಬಳ್ಳಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರೋಪ ಸಮಾರಂಬದಲ್ಲಿ ಮುಖ್ಯ ಅತಿಥಿಯಾಗಿ ಡಾ.ಪ್ರಭು ಬಿರಾದಾರ ಭಾಗವಹಿಸಿ, ಬಸವಾನಂದ ಗುರೂಜಿ ಅವರಿಗೆ ಫಲ ಪುಷ್ಪ ನೀಡಿ ಗೌರವ ಸನ್ಮಾನ ಮಾಡಲಾಯತು. ಅಧ್ಯಕ್ಷ ಕಿರಣ್ ಬಾಕಳೆ ಮತ್ತು ಉಪಾಧ್ಯಕ್ಷ ದಿನೇಶ್ ದಾಬಡೆ ಅತಿಥಿಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು.

ಡಾ, ಪ್ರಭು ಬಿರಾದಾರ ಮಾತನಾಡಿ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಯೋಗ ಬಹಳ ಮಹತ್ವದ್ದು. ರಾಜ್ಯ ಸರ್ಕಾರ ಕೂಡ ಜಿಲ್ಲಾ ಆಸ್ಪತ್ರೆ ಮತ್ತು ಪ್ರಾರ್ಥಮಿಕ ಕೇಂದ್ರಗಳಲ್ಲಿ ಯು ಕೂಡ healthwellness ಸೆಂಟರ್ ಯೋಜನೆ ಅಡಿಯಲ್ಲಿ ಯೋಗದ ಒಂದು ಕಟ್ಟಡ ಮಾಡಿ ಎಲ್ಲ ಆಸ್ಪತ್ರೆಯಲ್ಲಿ ದಿನಂಪ್ರತಿ ಯೋಗ ಮಾಡುವದನ್ನು ಕೂಡ ಅಳವಡಿಸಲಾಗಿದೆ. ಅಲ್ಲಿ ಯೋಗದ ಮಹತ್ವವನ್ನು ಕೂಡ ಹೇಳುತ್ತಾರೆ ಮತ್ತು ಮಾಡಿಸುತ್ತಾರೆ ಎಂದು ಹೇಳಿದರು.
ಉಪಾಧ್ಯಕ್ಷ ದಿನೇಶ್ ದಾಬಡೆ ಸ್ವಾಗತಿಸಿದರು. ಅತಿಥಿಗಳ ಪರಿಚಯ ಮತ್ತು hpva ಸಂಘದ ಉದ್ದೇಶ ಮತ್ತು ಚಟುವಟಿಕೆಗಳ ಮಾಹಿತಿ ಯೋಗದ ಬಗ್ಗೆ ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿದರು.
ಬಸವಾನಂದ ಗುರೂಜಿ ಮಾತನಾಡಿ, ಈ ಯೋಗದಿಂದ ನಿಮಗೆ ನೀವೇ ಕೋವಿಡ ಮಹಾಮಾರಿ ಎದುರಿಸಲು ‘ಸ್ವಯಂ ಕವಚ’ ಹಾಕಿಕೊಂಡಿದ್ದೀರಿ. ದಿನಂಪ್ರತಿ ಯೋಗ ಮಾಡಿದರೆ ನಿಮ್ಮ ಸನಿಹ ಕೊರೋನಾ ಬರುವುದಿಲ್ಲಾ, ನೆನಪಿಡಿ ಎಂದರು.
ಕಾರ್ಯಕ್ರಮ ನಿರೂಪಣೆಯನ್ನ ಉಮಾ ಹಿರೇಮಠ ಮಾಡಿದರು. ವಂದನಾರ್ಪಣೆಯನ್ನು ಆನಂದ ರಾಜೂಳ್ಳಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಸೇರಾದ ರವೀಂದ್ರ ಕಾಟಿಗರ ಉಪಸ್ಥಿತರಿದ್ದರು.