ಯಡಿಯೂರಪ್ಪನವರನ್ನ ಮುಂದಿಟ್ಟುಕೊಂಡು ಚುನಾವಣೆ ಮಾಡೋಕೆ ಆಗತ್ತಾ…!?
1 min readವಿಜಯಪುರ: ರಾಜ್ಯದ ಹಾಲಿ ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನ ಇಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗಲು ಆಗುವುದಿಲ್ಲವೆಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಾತನಾಡಿದ ಶಾಸಕ ಯತ್ನಾಳ, ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತ. ಈ ಸಿಎಂ ತೆಗೆದುಕೊಂಡು ಹೋದರೆ ಬಿಜೆಪಿ ಮುಂದಿನ ಚುನಾವಣೆ ಗೆಲ್ಲಲ್ಲ. ಬಿಜೆಪಿ ಉಳಿಯಬೇಕಾದ್ರೆ ಸಿಎಂ ಬದಲಾವಣೆ ಅಗತ್ಯ ಎಂದು ಹೇಳಿದರು.
ಸಿಎಂ ಯಡಿಯೂರಪ್ಪನವರ ಬಗ್ಗೆ ಈಗಾಗಲೇ ಪ್ರಧಾನ ಕಾರ್ಯದರ್ಶಿಯವರಿಗೆ ಗೊತ್ತಾಗಿದೆ. ಪಂಚರಾಜ್ಯಗಳ ಚುನಾವಣೆ ನಂತ್ರ ಸಿಎಂ ಬದಲಾವಣೆ ಶತಃಸಿದ್ದ ಎಂದು ಹೇಳಿದರು.