ಮಹಿಳೆಯರಿಬ್ಬರನ್ನ ಸುಟ್ಟು ಹಾಕಿದ್ದ ಆರೋಪಿಗಳನ್ನ ಹೆಡಮುರಿಗೆ ಕಟ್ಟಿದ “ಕಲಘಟಗಿ ಇನ್ಸಪೆಕ್ಟರ್ ಕೌಜಲಗಿ ಪಡೆ”….

ಧಾರವಾಡ: ಜಿಲ್ಲೆಯ ಅಪರಾಧ ಲೋಕವನ್ನೇ ಬೆಚ್ವಿ ಬೀಳಿಸಿದ್ದ ಪ್ರಕರಣವನ್ನ ಪತ್ತೆ ಹಚ್ಚಿ ಆರು ಆರೋಪಿಗಳನ್ನ ಬಂಧಿಸುವಲ್ಲಿ ಕಲಘಟಗಿ ಠಾಣೆ ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ತಂಡ ಯಶಸ್ವಿಯಾಗಿದೆ.
ಈ ಕುರಿತು ವೀಡಿಯೋ ವರದಿ…
ಹುಬ್ಬಳ್ಳಿಯ ಈಶ್ವರನಗರದ ನಿವಾಸಿಗಳಾದ ಇಂದ್ರಾಬಾಯಿ ಪವಾರ ಹಾಗೂ ಮಹಾದೇವಿ ನೀಲಮ್ಮನವರ ಎಂಬುವವರನ್ನ ಕೊಲೆ ಮಾಡಿ, ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡನಕೊಪ್ಪ ಹಾಗೂ ತಂಬೂರ ಕ್ರಾಸ್ ಬಳಿ ಆರೋಪಿಗಳು ಪೆಟ್ರೋಲ್ ಹಾಕಿ ಮಹಿಳೆಯರನ್ನ ಸುಟ್ಟು ಬಂದಿದ್ದರು.

ಆರೋಪಿಗಳನ್ನ ಹಾಲಿ ಈಶ್ವರನಗರದ ನಿವಾಸಿಯಾಗಿರುವ ಸೊರಬ ತಾಲ್ಲೂಕಿನ ತಲಗುಂದ ಗ್ರಾಮದ ದೇವರಾಜ ಮೊಗಲೇರ, ಅದರಗುಂಚಿಯ ಕಾಳಪ್ಪ ರೋಗಣ್ಣನವರ, ಬಸವರಾಜ ವಾಳದ, ಮಹ್ಮದರಫೀಕ ಬಡಿಗೇರ, ಶಿವಾನಂದ ಕೆಂಚಕ್ಕನವರ ಹಾಗೂ ಗಂಗಪ್ಪ ಮರತಂಗಿ ಎಂದು ಗುರುತಿಸಲಾಗಿದೆ.
ಈ ಪ್ರಕರಣವನ್ನ ಪತ್ತೆ ಹಚ್ಚಲು ಇನ್ಸಪೆಕ್ಟರ್ ಶ್ರೀಶೈಲ ಕೌಜಲಗಿ ತಂಡ ಹಗಲಿರುಳು ಶ್ರಮಿಸಿದ್ದು, ಇಂಥಹ ಅಧಿಕಾರಿಗಳಿಗೆ