Posts Slider

Karnataka Voice

Latest Kannada News

ಧಾರವಾಡದಲ್ಲಿ “30 ಸಾವಿರ”ಕ್ಕಾಗಿ ಮಹಿಳೆಯ ಮೇಲೆ ‘ಸುತ್ತಿಗೆ’ಯಿಂದ ಹಲ್ಲೆ- Exclusive Video

Spread the love

ಧಾರವಾಡ: ಕೊಟ್ಟ ಸಾಲದ ಹಣವನ್ನ ಮರಳಿ ಪಡೆಯಲು ಹೋದ ಮಹಿಳೆಯೋರ್ವಳ ಮೇಲೆ ಸುತ್ತಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೆಹಬೂಬನಗರದ ದೊಡ್ಡಮನಿ ಹಾಲ್ ಮುಂಭಾಗದಲ್ಲಿ ನಡೆದಿದೆ.

ಘಟನೆಯ ಎಕ್ಸಕ್ಲೂಸಿವ್ ಸಿಸಿಟಿವಿ ದೃಶ್ಯ

https://youtu.be/7J067afU9hY

ಧಾರವಾಡದ ಆಝಾದನಗರದ ಫಾತೀಮಾ ಎಂಬಾಕೆ ಇಕಬಾಲ್ ಕುಂದಗೋಳ ಎಂಬಾತನಿಗೆ ಮೂವತ್ತು ಸಾವಿರ ರೂಪಾಯಿ ಸಾಲವನ್ನ ನೀಡಿದ್ದಳು. ಹಲವು ತಿಂಗಳುಗಳಿಂದ ಹಣ ಮರಳಿಸದೇ ಸತಾಯಿಸುತ್ತಿದ್ದ.

ಇದೇ ಕಾರಣಕ್ಕೆ ಇಂದು ಕೈಗೆ ಸಿಕ್ಕ ಇಕಬಾಲ್‌ ನನ್ನ ಹಿಗ್ಗಾ-ಮುಗ್ಗಾ ಹೀಯಾಳಿಸಿ ಮಾತಾಡಿದ್ದಾಳೆ. ಇದೇ ಕಾರಣಕ್ಕೆ ರೋಸಿ ಹೋದ ಆತ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹೊಡೆದಿದ್ದರಿಂದ, ಫಾತೀಮಾಳ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿದೆ.

ಉಪನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *