Posts Slider

Karnataka Voice

Latest Kannada News

ಅಳ್ನಾವರದಲ್ಲಿ ಗಂಡ-ಹೆಂಡತಿ ಮತ್ತೂ ಅವನು…!

1 min read
Spread the love

ಧಾರವಾಡ: ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಸಿನೇಮಾವನ್ನ ಮೀರಿಸೋ ಪ್ರಕರಣವನ್ನ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಗಂಡ-ಹೆಂಡತಿಯ ನಡುವಿದ್ದ ಆತನನ್ನ ಪತ್ತೆ ಹಚ್ಚಿ ಎಳೆ ತಂದಿದ್ದಾರೆ.

ಹೌದು.. ಅಳ್ನಾವರ ಪಟ್ಟಣದ ಉದ್ಯಮಿ ಮಂಜುನಾಥ ಪೈ ಎಂಬುವವರ ಪತ್ನಿಯನ್ನ ಕರೆದುಕೊಂಡು ಹೋಗಿದ್ದ ವ್ಯಕ್ತಿಯನ್ನ ತೆಲಂಗಾಣದ ಜಿಲ್ಲೆಯೊಂದರಲ್ಲಿ, ಆಧಾರ ಕಾರ್ಡ ಹಾಗೂ ಆತನ್ ಬ್ಯಾಂಕ್ ಅಕೌಂಟ್ ಮೂಲಕ ಕಂಡು ಹಿಡಿದಿದ್ದಾರೆ.

ಆಗಿದ್ದೇನು: ಅಳ್ನಾವರ ಪಟ್ಟಣದ ನಿವಾಸಿಯಾಗಿದ್ದ ಮಂಜುನಾಥ ಪೈ ಎಂಬಾತನ ಪತ್ನಿಯನ್ನ ಅಭಿಷೇಕ ಬೋಗಾರ ಎಂಬಾತ ಪ್ರೀತಿಸಿ 2015ರಲ್ಲೇ ಕರೆದುಕೊಂಡು ಹೋಗಿದ್ದ. ಆದರೆ, ಇಲ್ಲಿಯವರೆಗೆ ದೂರು ನೀಡದ ಪತಿ, ಕಳೆದ 2020ರಲ್ಲಿ ಅಳ್ನಾವರ ಪೊಲೀಸ್ ಠಾಣೆಗೆ ಹೆಂಡತಿ ಅಪಹರಣವಾಗಿದೆ ಎಂದು ದೂರು ದಾಖಲು ಮಾಡಿದ್ದರು.

ದೂರಿನ ಬೆನ್ನು ಹತ್ತಿದ ಅಳ್ನಾವರ ಠಾಣೆ ಪೊಲೀಸರು ಅಭಿಷೇಕ ಬೋಗಾರ ಹಾಗೂ ಮಂಜುನಾಥ ಪೈ ಪತ್ನಿಯನ್ನ ತೆಲಂಗಾಣದಿಂದ ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದರು. ಆದರೆ, ಠಾಣೆಗೆ ಬಂದ ಮೇಲೆ ಮಂಜುನಾಥ ಪೈ ಪತ್ನಿ, ನನ್ನ ಅಪಹರಣವಾಗಿಲ್ಲ. ನಾನು ಸ್ವಯಂ ನಿರ್ಧಾರದಿಂದ ಹೋಗಿದ್ದೇನೆ ಎಂದು ಬರೆದುಕೊಟ್ಟು ಮತ್ತೆ ತೆಲಂಗಾಣದತ್ತ ಮರಳಿದ್ದಾರೆ.

ಪತಿ-ಪತ್ನಿ ನಡುವಿದ್ದ ಆತನನ್ನ ಪತ್ತೆ ಹಚ್ಚಲು ಅಳ್ನಾವರ ಪಿಎಸ್ಐ ಎಸ್.ಆರ್.ಕಣವಿ, ಸಿಬ್ಬಂದಿಗಳಾದ ನಾಗರಾಜ ಹಾಲವಾರ, ಮಹಾಂತೇಶ ಮದ್ದಿನ ಹಾಗೂ ಕವಿತಾ ಮೊರಬ ಪ್ರಕರಣವನ್ನ ಸುಖಾಂತ್ಯ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *