Posts Slider

Karnataka Voice

Latest Kannada News

ಎರಡೆತ್ತಿನ ಜೊತೆ ಇಬ್ಬರು ನೀರಲ್ಲಿ ನಾಪತ್ತೆ: ಹುಡುಕಾಟ ನಿರಂತರ

1 min read
Spread the love

ಹಾವೇರಿ: ಜಮೀನಿಗೆ ಹೋಗಿ ಎತ್ತಿನ ಬಂಡಿಯಲ್ಲಿ ಬರುವಾಗ ಇಬ್ಬರು ಹಾಗೂ ಎರಡು ಎತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ  ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದ ಬಳಿ ನಡೆದಿದೆ. ಕೊಚ್ಚಿಹೋದ ಎತ್ತಿನ ಬಂಡಿ ನೀರಿನಲ್ಲಿ ಕಂಡು ಬಂದಿದ್ದು, ಎರಡು ಎತ್ತು ಮತ್ತು ಬಂಡಿಯಲ್ಲಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ.

ರಕ್ಷಣೆ ಮಾಡುತ್ತಿರುವ ದೃಶ್ಯಗಳು

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರ ಆಗಮಿಸಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ. ನೀರಿನ ರಭಸ ಕಡಿಮೆಯಾಗಿದ್ದು, ಎತ್ತಿನ ಬಂಡಿ ಮಾತ್ರ ನೀರಿನ ದಿಬ್ಬದಲ್ಲಿ ನಿಂತಿದೆ. ಆದರೆ, ಅದರಲ್ಲಿದ್ದವರಾಗಲಿ, ಜೋಡೆತ್ತುಗಳಾಗಲಿ ಎಲ್ಲಿಯೂ ಕಂಡು ಬರುತ್ತಿಲ್ಲ.


Spread the love

Leave a Reply

Your email address will not be published. Required fields are marked *