Posts Slider

Karnataka Voice

Latest Kannada News

ಕರ್ನಾಟಕ  ವಕ್ಫ್ ಬೋರ್ಡ್ ಅಧ್ಯಕ್ಷ ಮೊಹ್ಮದ ಯೂಸುಫ್ ಕೊರೋನಾದಿಂದ ಸಾವು

1 min read
Spread the love

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನ ಅಧ್ಯಕ್ಷ ಡಾ.ಮೊಹಮ್ಮದ್ ಯೂಸಫ್ ರವರು ಇಂದು ಬೆಳೆಗ್ಗೆ ನಿಧನರಾಗಿದ್ದಾರೆ.

ಇದೇ  ವರ್ಷ ಅವರು ಚುನಾವಣೆ ಮುಖಾಂತರ ರಾಜ್ಯ ವಕ್ಫ್ ಬೋರ್ಡ್ ಗೆ ನೇಮಕವಾಗಿದ್ದರು. ಕೆಲವು ದಿನಗಳಿಂದ ಹಿಂದೆ ಇವರು ಕೊರೋನಾದಿಂದ ಸಾವಿಗೀಡಾಗಿದ್ದಾರೆಂದು ಊಹಾಪೋಹಗಳು ಕೂಡಾ ಎದ್ದಿದ್ದವು. ಆದರೆ, ಅದು ಸುಳ್ಳಾಗಿತ್ತು. ಅಷ್ಟೇ ಅಲ್ಲ, ಹಾಗೇ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪ್ರಕರಣವನ್ನೂ ದಾಖಲು ಮಾಡಲಾಗಿತ್ತು.

ಕೊರೋನಾ ಪಾಸಿಟಿವ್ ಆದ ನಂತರ ಅನಾರೋಗ್ಯಕ್ಕೆ ಈಡಾಗಿದ್ದ ಮೊಹ್ಮದ ಯೂಸುಫ್, ಇಂದು ಬೆಳಗಿನ ಜಾವ ಮೂರು ಗಂಟೆಗೆ ಮೃತಪಟ್ಟಿರುವುದನ್ನ ಅವರ ಮಗ ದೃಢಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *