ಇದ್ದದ್ದನ್ನ ಕಳೆದುಕೊಂಡು ಗದ್ದುಗೆಗಾಗಿ ಪರದಾಡುತ್ತಿರುವ ಹಳ್ಳಿ ಹಕ್ಕಿ
1 min readಬೆಂಗಳೂರು: ಜೆಡಿಎಸ್ ಪಕ್ಷದಲ್ಲಿದ್ದು ಅಧಿಕಾರಅನುಭವಿಸಿದ್ದು ಹುಣಸೂರಿನ ಶಾಸಕ ಎಚ್.ವಿಶ್ವನಾಥ,ಬಿಜೆಪಿಗೆ ಸೇರಿ ಸೋತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೀಗ,ಹಿಂದಿನ ಬಾಗಿಲಿನಿಂದ ಬರುವ ಬಗ್ಗೆ ವಿಚಾರ ಮಾಡುತ್ತಿದ್ದು, ಅದೇ ಕಾರಣಕ್ಕೆ ಇಂದು ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿದರು.
ಗೃಹ ಕಚೇರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತು ಮಾತನಾಡಿದ ವಿಶ್ವನಾಥ್, ಮಾತು ಕೊಟ್ಟಂತೆ ಪರಿಷತ್ ಚುನಾವಣೆಗೆ ತಮ್ಮನ್ನು ಪರಿಗಣಿಸುವಂತೆ ಕೋರಿಕೊಂಡರಂತೆ. ತಮ್ಮ ಜೊತೆಗೆ ಪಕ್ಷ ಹೋದವರು ಇಂದು ಮಂತ್ರಿಗಳಾಗಿದ್ದು, ವಿಶ್ವನಾಥ್ ಮಾತ್ರ, ಏನೂ ಆಗದೇ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.