Posts Slider

Karnataka Voice

Latest Kannada News

ರಾಜ್ಯಾಧ್ಯಂತ “ವೈರಲ್” ಆದ “ಈ” ಭಾವಚಿತ್ರ ತೆಗೆದಿದ್ದು ಯಾರೂ ಗೊತ್ತಾ….!!!?

Spread the love

ಧಾರವಾಡ: ಕರ್ನಾಟಕದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಪೈಕಿ ಮೊದಲ ಗ್ಯಾರಂಟಿಗೆ ಚಾಲನೆ ನೀಡಿದ ಸಮಯದಲ್ಲಿ ತೆಗೆದ ಭಾವಚಿತ್ರವೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆ ಭಾವಚಿತ್ರ ತೆಗೆದವರು ಯಾರೂ ಎಂಬುದನ್ನ ನಿಮಗೆ ಕರ್ನಾಟಕವಾಯ್ಸ್.ಕಾಂ ತಿಳಿಸಿಕೊಡುತ್ತಿದೆ.

ಈ ಭಾವಚಿತ್ರದ ಬಗ್ಗೆ ಸ್ವತಃ ಸಿಎಂ ಸಿದ್ಧರಾಮಯ್ಯ ಅವರು ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಳಕೆ ಮಾಡಿಕೊಂಡಿದ್ದಾರೆ.

ಅಂದ ಹಾಗೇ ಈ ಭಾವಚಿತ್ರವನ್ನ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ತೆಗೆಯಲಾಗಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಗೊಳ್ಳಿ ಗ್ರಾಮದ ನಿಂಗವ್ವ ಸಿಗಾಡಿ ಎಂಬ ವೃದ್ಧೆ ತನ್ನ ಮೊಮ್ಮಗನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಧಾರವಾಡ-ಗೋಕಾಕ ಬಸ್ ಹತ್ತುವಾಗ ಈ ಭಾವಚಿತ್ರವನ್ನ ತೆಗೆಯಲಾಗಿದೆ.

ದಶಕಗಳಿಂದ ಪೋಟೋಗ್ರಾಫಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಕೇದಾರಸ್ವಾಮಿ ಅವರೇ ಈ ಭಾವಚಿತ್ರವನ್ನ ಕ್ಲಿಕಿಸಿದ್ದು. ಒಂದು ಯೋಜನೆಯ ಸಾರ್ಥಕತೆ ಯಾವ ಮಟ್ಟಕ್ಕೆ ಇರುತ್ತದೆ ಎಂಬುದನ್ಮ ಈ ಭಾವಚಿತ್ರ ತೋರಿಸಿಕೊಟ್ಟಿದೆ.

ಇಂತಹ ಭಾವಚಿತ್ರವನ್ನ ತೆಗೆಯಲು ಜರ್ನಲಿಸಂ ಮನಸ್ಸು ಅವಶ್ಯಕ. ಕೇದಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ. ಸಿಎಂ ಸಿದ್ಧರಾಮಯ್ಯನವರು ಈ ಭಾವಚಿತ್ರಕ್ಕೆ ‘ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರ’ ಎಂದಿದ್ದಾರೆ. ಅದು ನಿಜ ಕೂಡಾ. ಜೀವಪರತೆ ಹೊಂದಿದ ಕೇದಾರಸ್ವಾಮಿ ಥರದವರು ಇವತ್ತಿನ ಮಾಧ್ಯಮದಲ್ಲಿ ತೀರಾ ವಿರಳ.

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವ ಸಮಯದಲ್ಲಿ ಸಚಿವ ಸಂತೋಷ ಲಾಡ ಕೂಡಾ ಇದ್ದರು.

 


Spread the love

1 thought on “ರಾಜ್ಯಾಧ್ಯಂತ “ವೈರಲ್” ಆದ “ಈ” ಭಾವಚಿತ್ರ ತೆಗೆದಿದ್ದು ಯಾರೂ ಗೊತ್ತಾ….!!!?

Leave a Reply

Your email address will not be published. Required fields are marked *