ರಾಜ್ಯಾಧ್ಯಂತ “ವೈರಲ್” ಆದ “ಈ” ಭಾವಚಿತ್ರ ತೆಗೆದಿದ್ದು ಯಾರೂ ಗೊತ್ತಾ….!!!?

ಧಾರವಾಡ: ಕರ್ನಾಟಕದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಪೈಕಿ ಮೊದಲ ಗ್ಯಾರಂಟಿಗೆ ಚಾಲನೆ ನೀಡಿದ ಸಮಯದಲ್ಲಿ ತೆಗೆದ ಭಾವಚಿತ್ರವೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆ ಭಾವಚಿತ್ರ ತೆಗೆದವರು ಯಾರೂ ಎಂಬುದನ್ನ ನಿಮಗೆ ಕರ್ನಾಟಕವಾಯ್ಸ್.ಕಾಂ ತಿಳಿಸಿಕೊಡುತ್ತಿದೆ.
ಈ ಭಾವಚಿತ್ರದ ಬಗ್ಗೆ ಸ್ವತಃ ಸಿಎಂ ಸಿದ್ಧರಾಮಯ್ಯ ಅವರು ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಳಕೆ ಮಾಡಿಕೊಂಡಿದ್ದಾರೆ.
ಅಂದ ಹಾಗೇ ಈ ಭಾವಚಿತ್ರವನ್ನ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ತೆಗೆಯಲಾಗಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಗೊಳ್ಳಿ ಗ್ರಾಮದ ನಿಂಗವ್ವ ಸಿಗಾಡಿ ಎಂಬ ವೃದ್ಧೆ ತನ್ನ ಮೊಮ್ಮಗನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಧಾರವಾಡ-ಗೋಕಾಕ ಬಸ್ ಹತ್ತುವಾಗ ಈ ಭಾವಚಿತ್ರವನ್ನ ತೆಗೆಯಲಾಗಿದೆ.
ದಶಕಗಳಿಂದ ಪೋಟೋಗ್ರಾಫಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಕೇದಾರಸ್ವಾಮಿ ಅವರೇ ಈ ಭಾವಚಿತ್ರವನ್ನ ಕ್ಲಿಕಿಸಿದ್ದು. ಒಂದು ಯೋಜನೆಯ ಸಾರ್ಥಕತೆ ಯಾವ ಮಟ್ಟಕ್ಕೆ ಇರುತ್ತದೆ ಎಂಬುದನ್ಮ ಈ ಭಾವಚಿತ್ರ ತೋರಿಸಿಕೊಟ್ಟಿದೆ.
ಇಂತಹ ಭಾವಚಿತ್ರವನ್ನ ತೆಗೆಯಲು ಜರ್ನಲಿಸಂ ಮನಸ್ಸು ಅವಶ್ಯಕ. ಕೇದಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ. ಸಿಎಂ ಸಿದ್ಧರಾಮಯ್ಯನವರು ಈ ಭಾವಚಿತ್ರಕ್ಕೆ ‘ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರ’ ಎಂದಿದ್ದಾರೆ. ಅದು ನಿಜ ಕೂಡಾ. ಜೀವಪರತೆ ಹೊಂದಿದ ಕೇದಾರಸ್ವಾಮಿ ಥರದವರು ಇವತ್ತಿನ ಮಾಧ್ಯಮದಲ್ಲಿ ತೀರಾ ವಿರಳ.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡುವ ಸಮಯದಲ್ಲಿ ಸಚಿವ ಸಂತೋಷ ಲಾಡ ಕೂಡಾ ಇದ್ದರು.
1 thought on “ರಾಜ್ಯಾಧ್ಯಂತ “ವೈರಲ್” ಆದ “ಈ” ಭಾವಚಿತ್ರ ತೆಗೆದಿದ್ದು ಯಾರೂ ಗೊತ್ತಾ….!!!?”