Posts Slider

Karnataka Voice

Latest Kannada News

Spread the love

ನವದೆಹಲಿ: ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಜಾಮೀನು ದೊರೆತಿದೆ. ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಕಳೆದ ನವೆಂಬರ್ 5 ರಂದು ಬಂಧನಕ್ಕೆ ಒಳಗಾಗಿದ್ದರು.

ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನವಾಗಿತ್ತು.

ಹಲವು ರೀತಿಯ ಕಟ್ಟಪ್ಪಣೆ ಮೇರೆಗೆ ಜಾಮೀನು ಮಂಜೂರು ಮಾಡಲಾಗಿದೆ. ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿನ 302 ಸಂಬಂಧ ಜಾಮೀನು ಸಿಕ್ಕಿದ್ದು, ಸಾಕ್ಷ್ಯ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರಕಬೇಕಿದೆ. ಅಲ್ಲಿಯವರೆಗೂ ಇನ್ನೂ ಹಿಂಡಲಗಾ ಜೈಲಿನಲ್ಲಿರಬೇಕಾಗಿದೆ.

2016 ಜುಲೈ 15 ರಂದು ಬಿಜೆಪಿ ಯುವ ಮುಖಂಡ ಯೋಗೇಶ್​​​ ಗೌಡ ಹತ್ಯೆ ನಡೆದಿತ್ತು. ಈ ಸಂಬಂಧವಾಗಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಕರಣ ಸಿಬಿಐಗೆ ವಹಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿನಯ ಕುಲಕರ್ಣಿಯನ್ನು ಅರೆಸ್ಟ್ ಮಾಡಿತ್ತು. ಅರೆಸ್ಟ್​​ ಆಗಿದ್ದ ವಿನಯ ಕುಲಕರ್ಣಿಗೆ  ಜನಪ್ರತಿನಿಧಿಗಳ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇವತ್ತು ಸುಪ್ರಿಂ ಕೋರ್ಟ್​​ ಜಾಮೀನು ನೀಡಿದೆ. ಆದರೆ ವಿನಯ್​ ಕುಲಕರ್ಣಿ ವಿರುದ್ಧ ಸಾಕ್ಷ್ಯ ನಾಶ ಕೇಸ್​ ಬಾಕಿ ಇರೋದ್ರಿಂದ ಆ ಕೇಸಲ್ಲೂ ಜಾಮೀನು ಸಿಗಬೇಕಿದೆ. ಆ ಬಳಿಕೇ ವಿನಯ ಕುಲಕರ್ಣಿಗೆ ಬಿಡುಗಡೆ ಭಾಗ್ಯ ದೊರೆಯಲಿದೆ.


Spread the love

Leave a Reply

Your email address will not be published. Required fields are marked *