“ನವೆಂಬರ್ 7ಕ್ಕೆ” ವಿನಯ ಕುಲಕರ್ಣಿಯವರ ‘ಅದ್ದೂರಿ’ ಹುಟ್ಟುಹಬ್ಬ: ಎಲ್ಲಿ ನಡಿತೀದೆ ಗೊತ್ತಾ…!?

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರ ಜನ್ಮ ದಿನವನ್ನ ಅದ್ಧೂರಿಯಿಂದ ಆಚರಣೆ ಮಾಡಲು ಅವರ ಅಭಿಮಾನಿಗಳು, ಕಾರ್ಯಕರ್ತರು ಮುಂದಾಗಿದ್ದು, ಅದಕ್ಕಾಗಿ ಉತ್ತಮ ಜಾಗದ ಹುಡುಕಾಟ ಆರಂಭಿಸಿದ್ದಾರೆ.

ಧಾರವಾಡ-71 ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಸಡಗರದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಅದೇ ಕಾರಣಕ್ಕೆ ಕಿತ್ತೂರು ಬಳಿ ಜಾಗವನ್ನ ಪೈನಲ್ ಮಾಡಲಾಗಿದ್ದು, ಅಲ್ಲಿಯೇ ಅದ್ಧೂರಿ ಸಮಾರಂಭ ನಡೆಯಲಿದೆ.
ನವೆಂಬರ್ 7, 1967 ರಲ್ಲಿ ಗುಮ್ಮಗೋಳದಲ್ಲಿ ಜನಿಸಿರುವ ವಿನಯ ಕುಲಕರ್ಣಿಯವರಿಗೆ ಈ ಸಲದ ಜನ್ಮ ದಿನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉತ್ಸಾಹದಿಂದ ನಲಿದಾಡುತ್ತಿದ್ದಾರೆ.