Posts Slider

Karnataka Voice

Latest Kannada News

ವಿಜಯಪುರದಲ್ಲಿ ಸಿಬಿಐ ದಾಳಿ…!

Spread the love

ವಿಜಯಪುರ: ನಗರದ ಬಸವೇಶ್ವರ ವೃತ್ತದ ಬಳಿಯಿರುವ ಬಿಎಸ್ಎನ್ಎಲ್ ಕಚೇರಿ ಮೇಲೆ ದೆಹಲಿಯಿಂದ ಬಂದಿರುವ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಮುಖವಾದ ಮಾಹಿತಿಯನ್ನ ಕಲೆ ಹಾಕಿದ್ದಾರೆ.

ENQUIRY EXCLUSIVE VIDEOS

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮ ನಡೆದಿತ್ತು. ಪ್ರತಿ ಗ್ರಾಮ ಪಂಚಾಯತಿಗೂ ಫೈಬರ್ ಕೇಬಲ್ ಸಂಪರ್ಕ ನೀಡಬೇಕಿದ್ದ ಬಿಎಸ್ಎನ್ಎಲ್, ಕೆಲವು ಪಂಚಾಯತಿಗಳಿಗೆ ಮಾತ್ರ ಸಂಪರ್ಕ ನೀಡಿದೆ. ಬಹುತೇಕ ಪಂಚಾಯತಿಗಳಿಗೆ ಬಿಲ್ ಪಾವತಿ ಮಾಡಿರುವ ಆರೋಪ ಹಿನ್ನೆಲೆ ಸಿಬಿಐ ದಾಳಿ ಮಾಡಿದೆ ಎನ್ನಲಾಗುತ್ತಿದೆ. ಸುದೀರ್ಘ 4 ಗಂಟೆಗೆಳ ಕಾಲ‌ ಪರಿಶೀಲನೆಯನ್ನ ನಡೆಸಿದ ಸಿಬಿಐ ಅಧಿಕಾರಿಗಳು ನಿರ್ಗಮಿಸಿದರು.

ಅಧಿಕಾರಿಗಳು ಕಚೇರಿಗೆ ಬಂದ ಸಮಯದಲ್ಲಿ ಆಪೀಸನಲ್ಲಿದ್ದ ಎಲ್ಲರೂ ಒಳಗೆ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೊರಗೆ ಹೋದ ನಂತರವೇ, ಕಚೇರಿಯಲ್ಲಿದ್ದ ಸಿಬ್ಬಂದಿಗಳು ಮನೆಗೆ ತೆರಳಿದ್ದಾರೆ.

ಬಿಎಸ್ಎನ್ಎಲ್ ಕಚೇರಿಗೆ ಸಿಬಿಐ ದಾಳಿ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಊಹಾಪೋಹಗಳು ಕೂಡಾ ಹೆಚ್ಚಾಗಿವೆ.


Spread the love

Leave a Reply

Your email address will not be published. Required fields are marked *