ಶಾಸಕ ಯತ್ನಾಳರನ್ನ ಹಾಡುಹಗಲೇ ಕತ್ತರಿಸುವ ಬೆದರಿಕೆ: ಪೊಲೀಸ್ ಠಾಣೆ ಮುಂದೆ ಎಚ್ಚರಿಕೆ
1 min readವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡಾ ಪಾಟೀಲ ಯತ್ನಾಳರನ್ನು ಹಾಡಹಗಲೇ ಮನೆ ಹೊಕ್ಕು ಕಡೆಯುತ್ತೇನೆಂದು ಎಂದು ಪೊಲೀಸ್ ಠಾಣೆ ಮುಂದೆ ವ್ಯಕ್ತಿಯೋರ್ವ ಕೊಲೆ ಬೆದರಿಕೆ ಹಾಕಿರುವ ಘಟನೆ ವಿಜಯಪುರದ ಗೋಳಗುಮ್ಮಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವಿಜಯಪುರ ನಗರ ನಿವಾಸಿ ರಾಘು ಕಣಮೇಶ್ವರ, ಶಾಸಕ ಯತ್ನಾಳ್ ಬಾಬಾ ಸಾಹೇಬರ ಕಾನೂನು ಬಗ್ಗೆ ಏನಾದರು ಮಾತನಾಡಿದ್ರೇ ಮನೆ ಹೊಕ್ಕು ಕಡೆಯುತ್ತೇನೆ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾನೆ.
ನಗರದ ಅವ್ಯವಸ್ಥೆ ಬಗ್ಗೆ ನಿನ್ನೆ ಮಾಧ್ಯಮಗಳಿಗೆ ವಕೀಲ ಎಸ್.ಎಸ್. ಖಾದ್ರಿ ಶಾಸಕ ಯತ್ನಾಳ್ ಬಗ್ಗೆ ಆರೋಪಗಳ ಸುರಿಮಳೆ ಸುರಿಸಿದ್ದರು. ಇದರ ಹಿನ್ನೆಲೆ ಖಾದ್ರಿ ಮೇಲೆ ಗೋಳಗುಮ್ಮಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ಠಾಣೆಗೆ ಖಾದ್ರಿ ತಮ್ಮ ಬೆಂಬಲಿಗರೊಂದಿಗೆ ಹಾಜರಾಗಲು ಬಂದಾಗ ರಾಘು, ಶಾಸಕ ಯತ್ನಾಳ್ ಕಡಿದು ಹಾಕುತ್ತೇನೆಂದು ಹೇಳಿದ್ದಾನೆ. ವಿಪರ್ಯಾಸ ಎಂದ್ರೆ ಪೊಲೀಸ್ ಠಾಣೆಯಲ್ಲೆ ಈ ರೀತಿ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ರು ಪೊಲೀಸರು ಮಾತ್ರ ಗಪ್ ಚುಪ್ ಆಗಿದ್ದಾರೆ. ಇನ್ನು ನಿನ್ನೆ ಡಿಜಿ ಐಜಿಪಿ ವಿಜಯಪುರ ಜಿಲ್ಲೆಗೆ ಆಗಮಿಸಿ ಜಿಲ್ಲೆಯ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ವಾರ್ನಿಂಗ್ ಮಾಡಿದ ಬೆನ್ನಲ್ಲೇ ಈ ರೀತಿ ಶಾಸಕ ಯತ್ನಾಳ ಎಚ್ಚರಿಕೆ ನೀಡಿದ್ರೂ ಪೊಲೀಸ್ ಮೂಖ ಪ್ರೇಕ್ಷರಂತೆ ನಡೆದುಕೊಂಡಿರುವುದು ಸೋಜಿಗದ ಸಂಗತಿಯಾಗಿದೆ.