4ವರ್ಷದ ನಂತರ ತಂದೆಯ ಆಗಮನ: ವೈಶಾಲಿ ಕುಲಕರ್ಣಿ ಹೇಳಿದ್ದೇನು ಗೊತ್ತಾ…!?

ಶಾಸಕ ಕುಲಕರ್ಣಿ ಆಗಮನ ಹಿನ್ನೆಲೆ ಖುಷಿ ಹಂಚಿಕೊಂಡ ವಿನಯ ಕುಲಕರ್ಣಿ ಪುತ್ರಿ ವೈಶಾಲಿ
ಧಾರವಾಡ: ನಮ್ಮ ತಂದೆ ಧಾರವಾಡಕ್ಕೆ ಮತ ಚಲಾಯಿಸಲು ಆಗಮಿಸುತ್ತಿರುವುದು ಖುಷಿ ತಂದಿದೆ ಎಂದು ಶಾಸಕ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಹೇಳಿದರು.
ವೀಡಿಯೋ…
ನಗರದ ಶಾರದಾ ಸ್ಕೂಲ್ ಬಳಿ ಮಾದ್ಯಮದವರ ಜೊತೆ ಮಾತನಾಡಿದ ಅವರು, ಮತ ಚಲಾಯಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು ನಮ್ಮ ತಂದೆ ಮತದಾನ ಮಾಡಲು ಧಾರವಾಡಕ್ಕೆ ಬರುತ್ತಿರುವ ವಿಷಯ ಕೇಳಿ ಖುಷಿಯಾಗಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ಧಾರವಾಡಕ್ಕೆ ನಮ್ಮ ತಂದೆ ಬಂದಿರಲಿಲ್ಲ, ಕೋರ್ಟ್ ಅನುಮತಿ ನೀಡಿರುವುದು ಖುಷಿ ತಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಖುಷಿಯಾಗಿದ್ದಾರೆ ಎಂದರು.